ಕಾರ್ಕಳ: ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ ಮಂಜುನಾಥ್ ಎ.ಕೋಟ್ಯಾನ್ ನೆರವೇರಿಸಿ, ಭವಿಷ್ಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ರೋಟರಾಕ್ಟ್ ಕ್ಲಬ್ ಮಾದರಿ ಎಂದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ.ಭರತೇಶ್ ಆದಿರಾಜ್ ಪದಗ್ರಹಣವನ್ನು ನೆರವೇರಿಸಿ,ರೋಟರಾಕ್ಟ್ ಕ್ಲಬ್ ನ ಪ್ರಾಮುಖ್ಯತೆಯನ್ನು ವಿವರಿಸಿದರು.
ವೇದಿಕೆಯಲ್ಲಿ, ರೋಟರಿ ಕ್ಲಬ್ ಕಾರ್ಕಳ ಕಾರ್ ಸಿಟಿಯ ಅಧ್ಯಕ್ಷರಾದ ಉಪೇಂದ್ರ ವಾಗ್ಳೆ,ಟೀಚರ್ ಕೋ ಆರ್ಡಿನೇಟರ್ ರಾಮದಾಸ ಶೆಟ್ಟಿ, ಡಿಸ್ಟ್ರಿಕ್ಟ್ ಡಿ.ಆರ್.ಆರ್.ಚೇತನ್ ಕುಮಾರ್, ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಅಕ್ಷಿತಾ ಶೆಟ್ಟಿಗಾರ್, ಕಾರ್ಯದರ್ಶಿ ರಕ್ಷಣ್, ನಿಕಟ ಪೂರ್ವ ಅಧ್ಯಕ್ಷರಾದ ಶೈನಾ ಪಿರೇರ, ನಿಕಟಪೂರ್ವ ಕಾರ್ಯದರ್ಶಿ ಶ್ರೇಯಾ ಶೆಟ್ಟಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕಾರ್ಕಳ ಕಾರ್ ಸಿಟಿಯ ಸದಸ್ಯರಾದ ಸುರೇಂದ್ರ ನಾಯಕ್, ಸುರೇಶ್ ನಾಯಕ್, ಚಿರಾಗ್ ರಾವ್, ಅಬ್ದುಲ್ ರಹೀಮಾನ್, ಗೀತಾರಾವ್ ಭಾಗವಹಿಸಿದ್ದರು.
ವಿದ್ಯಾರ್ಥಿನಿ ವಿಯೋಲ ರೊಸಾರಿಯೋ ಕಾರ್ಯಕ್ರಮ ನಿರೂಪಿಸಿದರು
`