Share this news

ಕಾರ್ಕಳ : ಕಾರ್ಕಳ ತಾಲೂಕು ಸಾಣೂರಿನ ಶಾಂಭವಿ ನದಿಗೆ ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಸೆ.21 ರಂದು ನಡೆದಿದೆ.

ಇರ್ವತ್ತೂರು ಗ್ರಾಮದ ಪುಷ್ಪ ಎಂಬವರ ಮಗ ಚರಣ್‌ ರಾಜ್‌ (13) ಸಾಣೂರು ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ಚರಣ್ ರಾಜ್ ಸೆ.21 ಶನಿವಾರದಂದು ಮಧ್ಯಾಹ್ನ ಶಾಲೆಗೆ ರಜೆ ಇದ್ದ ಕಾರಣ ಸಂಜೆ ಸ್ನೇಹಿತರ ಜೊತೆ ಇರ್ವತ್ತೂರು ಗ್ರಾಮದ ಗೊಲ್ದಿಂಡಿ ಎಂಬಲ್ಲಿ ಆಟವಾಡುತ್ತಿವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಗೆ ಬಿದ್ದಿದ್ದ.

ಕೂಡಲೇ ಗ್ರಾಮಸ್ಥರು ಅವನನ್ನು ನೀರಿನಿಂದ ಎತ್ತಿ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆ ವೇಳೆಗಾಗಲೇ ಚರಣ್ ರಾಜ್ ಮೃತಪಟ್ಟಿದ್ದ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

                       in 

Leave a Reply

Your email address will not be published. Required fields are marked *