Share this news

ಮಂಡ್ಯ: ಇಡಿ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕೊನೆಗೂ ಪ್ರಕರಣದ ಕಿಂಗ್‌ಪಿನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸಿಐಡಿಗೂ ಚಳ್ಳೆಹಣ್ಣು ತಿನ್ನಿಸಿ ದಂಧೆ ವಿಸ್ತರಿಸಿದ್ದ ಚಾಲಾಕಿ ಅಭಿಷೇಕ್ ಬಂಧಿತ ಪ್ರಮುಖ ಆರೋಪಿ. ಕಿಂಗ್‌ಪಿನ್ ಅಭಿಷೇಕ್ ಜೊತೆ ವಿರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ.

ಈಗಾಗಲೇ ಭ್ರೂಣ ಹತ್ಯೆ ಕೇಸ್‌ನಲ್ಲಿ ವಿರೇಶ್ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಅಭಿಷೇಕ್ ಪಾಂಡವಪುರ ತಾಲೂಕಿನ ಎಂ ಶೆಟ್ಟಿಹಳ್ಳಿ ನಿವಾಸಿ. ಬಂಧಿತರಿಂದ 2 ಸ್ಕ್ಯಾನಿಂಗ್ ಮಷಿನ್, 3 ಕಾರು, ಮೊಬೈಲ್ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಭೇದಿಸಲು ಏಳು ತಂಡ ರಚನೆ ಮಾಡಲಾಗಿತ್ತು.

ಈ ಪ್ರಕರಣದ ಕಿಂಗ್‌ಪಿನ್ ಅಭಿಷೇಕ್‌ನ ನೆಟ್‌ವರ್ಕ್ ಮತ್ತು ತಂತ್ರಗಾರಿಗೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತನ್ನದೇ ನೆಟ್‌ವರ್ಕ್ ಮೂಲಕ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಹೇಯ ಕೃತ್ಯ ನಡೆಸುತ್ತಿದ್ದ. ಪೊಲೀಸರನ್ನು ಯಾಮಾರಿಸಲು ಮೊಬೈಲ್ ಬದಲು ಇಂಟರ್ನೆಟ್ ಕಾಲ್ ಬಳಕೆ ಮಾಡುತ್ತಿದ್ದ. ಹಾಡ್ಯ ಗ್ರಾಮದ ಆಲೆಮನೆ ಕೇಸ್‌ನಲ್ಲಿ ಸಿಐಡಿ ಕೈಗೂ ಸಿಗದೆ ದಂಧೆ ವಿಸ್ತರಣೆ ಮಾಡಲಾಗಿತ್ತು. ಆಲೆಮನೆ ಪ್ರಕರಣವನ್ನೇ ಬಳಸಿಕೊಂಡು ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದ. ಒಂದು ಹೆಣ್ಣು ಭ್ರೂಣಹತ್ಯೆಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ಹಣ ಪಡೆಯುತ್ತಿದ. ಆಲೆಮನೆ, ಪಾಂಡವಪುರ ಹೆಲ್ತ್ ಕ್ವಾಟರ್ಸ್ ಕೇಸ್ ಸೇರಿದಂತೆ 5 ಕೇಸ್‌ನಲ್ಲಿ ಅಭಿಷೇಕ್ ಕಿಂಗ್‌ಪಿನ್ ಆಗಿದ್ದಾನೆ. ಓಮಿನಿ ವಾಹನದಲ್ಲಿ ತಾನೇ ಸ್ಕ್ಯಾನಿಂಗ್ ಮಾಡುತ್ತಿದ್ದ.

ವೈದ್ಯರೊಬ್ಬರಿಂದ 5 ಸ್ಕ್ಯಾನಿಂಗ್ ಮಷಿನ್ ಖರೀದಿಸಿದ್ದ ಈತ ಸ್ಕ್ಯಾನಿಂಗ್‌ನಲ್ಲಿ ಹೆಣ್ಣು ಭ್ರೂಣ ಪತ್ತೆಯಾದರೆ, ಮಾತ್ರೆ ಬಳಸಿ ಭ್ರೂಣ ಹತ್ಯೆ ಮಾಡಲಾಗುತ್ತಿತತು. ಬಳಿಕ ಕರುಳಬಳ್ಳಿ ಹೊರೆ ತೆಗೆದು ಮೆಡಿಕಲ್ ತ್ಯಾಜ್ಯದೊಂದಿಗೆ ಎಸೆಯುತ್ತಿದ್ದ.

 

                        

                          

                        

                       

Leave a Reply

Your email address will not be published. Required fields are marked *