ಕಾರ್ಕಳ: ಯಾವುದೇ ದೈವಸ್ಥಾನಗಳಲ್ಲಿ ಕಾರ್ಣಿಕ ಉಳಿಯಬೇಕಾದರೆ ಅನಾದಿ ಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕ್ರಮ ಕಟ್ಟು ಕಟ್ಟಳೆ ರೀತಿ ರೀವಾಜುಗಳಿಗೆ ಸ್ವಲ್ಪವೂ ಚ್ಯುತಿಯಾಗದಂತೆ ಕಾಪಾಡಿಕೊಂಡು ಬರಬೇಕಾಗುತ್ತದೆ ಬದಲಾಗಿ ಮೂಲ ವಿಚಾರವನ್ನು ಮರೆತು ತಮ್ಮ ಆಡಂಬರದ ಪ್ರಚಾರಕ್ಕಾಗಿ ಮಾರ್ಪಡುಗಳನ್ನು ಮಾಡುವುದು ಸರಿಯಲ್ಲ. ದೈವಸ್ಥಾನಗಳು ಭಕ್ತಿಯ ಶ್ರದ್ದೆಯ ಕೇಂದ್ರಗಳಾಗಬೇಕು ವಿನಃ ಆಡಂಬರದ ಕೇಂದ್ರವಾಗಬಾರದು ಎಂದು ಡಾ.ರವೀಶ್ ಪಡುಮಲೆ ಹೇಳಿದರು.
ಅವರು ಈದು ಮುಜಿಲ್ನಾಯ ದೈವಸ್ಥಾನದಲ್ಲಿ ಬೊಳ್ಳೊಟ್ಟು ಬ್ರಹ್ಮ ಮುಜಿಲ್ನಾಯ ದೈವಸ್ಥಾನ ಜೀರ್ಣೋದ್ದಾರಾದ ಮನವಿ ಪತ್ರ ಬಿಡುಗಡೆ ಸಂದರ್ಭ ಧಾರ್ಮಿಕ ಪ್ರವಚನ ನೀಡಿದರು. ನಾಡಿನಲ್ಲಿ ಇಂದಿಗೂ ಅನಾದಿ ಕಾಲದ ಕಟ್ಟು ಕಟ್ಟಲೆಗಳು ಜೀವಂತವಾಗಿರುವುದರಿAದಲೇ ತುಳುನಾಡಿನಲ್ಲಿ ಅತ್ಯಂತ ಕಾರಣೀಕ ಕ್ಷೇತ್ರವಾಗಿ ಉಳಿದಿದ್ದು, ಇಲ್ಲಿಯ ದರ್ಶನ ಮಾಡಿದಾಗ ಮೈ ರೋಮಾಂಚನಗೊಳ್ಳುತ್ತದೆ ಎಂದರು.
ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಭಾಸ್ಕರ ಎಸ್ ಕೋಟ್ಯಾನ್ ಮಾತನಾಡಿ, ಈದು ಗ್ರಾಮಸ್ಥರು ಹಿಂದಿನಿAದಲೂ ಧಾರ್ಮಿಕ ಚಟುವಟಿಕೆಗಳಲ್ಲಿ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಾ ಬಂದವರು. ಹಾಗಾಗಿ ಬೊಳ್ಳೊಟ್ಟು ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದರು.
ಸಮಿತಿಯ ಅಧ್ಯಕ್ಷರಾದ ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮೊಕ್ತೇಸರರಾದ ಅಶೋಕ್ ಕುಮಾರ್ ಜೈನ್, ಉದ್ಯಮಿ ಪ್ರೇಮ್ ಕುಮಾರ್, ಅರ್ಚಕರಾದ ಕೃಷ್ಣ ತಂತ್ರಿಯವರು ಉಪಸ್ಥಿತರಿದ್ದರು.
ರಾಜು ಪೂಜಾರಿ ಪ್ರಾರ್ಥನೆ ನೆರವೇರಿಸಿದರು. ಪ್ರಶಾಂತ್ ಚಿತ್ತಾರ ಕಾರ್ಯಕ್ರಮ ನಿರೂಪಿಸಿ, ಶ್ರೀಧರ ಗೌಡ ವಂದಿಸಿದರು.