ಕೋಟ: ಮಣೂರು ಕೊಯ್ಕೂರು ಎಂಬಲ್ಲಿ ಮಾ.20ರಂದು ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಣೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ (38) ಎಂಬಾತನನ್ನು ಕೋಟ ಪೊಲೀಸರು ತೆಕ್ಕಟ್ಟೆ ಬಳಿ ಬಂಧಿಸಿದ್ದಾರೆ.
ಈತನಿಂದ ಕಳವು ಮಾಡಿದ್ದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಮಾ.20ರಂದು ರಾತ್ರಿ ಮಣೂರು ಕೊಯ್ಕೂರು ನಿವಾಸಿ ಶ್ರೀಧರ್ ಎಂಬವರ ಮನೆಗೆ ಯಾರು ಇಲ್ಲದ ಸಮಯ ನುಗ್ಗಿ ಚಿನ್ನದ ಸರ ಕಳವು ಮಾಡಿದ್ದು, ಈ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಕೋಟ ಪೊಲೀಸ್ ಠಾಣೆಯ ಎಸ್ಸೈಗಳಾದ ರಾಘವೇಂದ್ರ ಸಿ., ಸುಧಾಪ್ರಭು ಪ್ರಕರಣದ ಖಚಿತ ಮಾಹಿತಿಯಂತೆ ಆರೋಪಿಯನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಹಾಯಕ ಉಪನಿರೀಕ್ಷಕ ಜಯಪ್ರಕಾಶ್, ಹೆಡ್ ಕಾನ್ಸ್ಸ್ಟೇಬಲ್ಗಳಾದ ರೇವತಿ, ಕೃಷ್ಣ ಶೇರೆಗಾರ, ಶ್ರೀಧರ್, ಸಿಬ್ಬಂದಿ ರಾಘವೇಂದ್ರ, ವಿಜಯೇಂದ್ರ ಪಾಲ್ಗೊಂಡಿದ್ದರು
K