Share this news

ಲೇಖನ:  ಜಿತೇಂದ್ರ ಕುಂದೇಶ್ವರ

ಮಂಗಳೂರು ಉತ್ತರದಲ್ಲಿ ಕಾಂಗ್ರೆಸಿಂದ #ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಾವಾ ಅವರ ಕೈ ಖಾಲಿಯಾಗಿ ಸ್ವಂತ ಕ್ಷೇತ್ರದಲ್ಲಿ ಮನೆಗೆ ಬೀಗ ಹಾಕಿ ಪೇಟೆಗೆ ಬಂದಿದ್ದಾರೆ. ತಮ್ಮ ಫಾರೂಕ್‌ನಿಂದ ದೇಣಿಗೆ ಸಿಗಬಹುದು ಆದರೆ ಅವರು #ಜೆಡಿಎಸ್‌ ನಲ್ಲಿ #ಪರಿಷತ್‌ ಸದಸ್ಯರು_.
ಸದ್ಯಕ್ಕೆ #ಕೈ ಕೈ ಹಿಸುಕಿಕೊಳ್ಳುತ್ತಿರುವ ಬಾವ ಅವರ ಎದುರು ಕಣ್ಣು ಕೋರೈಸುವಂತೆ ಧನ, ಜನಬಲದಿಂದ ರೈಸುತ್ತಿರುವ ಉದ್ಯಮಿ #ಇನಾಯತ್‌ ಅಲಿ ಅವರೇ ಸದ್ಯಕ್ಕೆ ಪ್ರತಿಸ್ಪರ್ಧಿ.

ಅಲಿ ಅವರ ಪ್ರವೇಶದಿಂದ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸಿನ ಟಿಕೆಟ್‌ ಯಾರಿಗೆ ಎಂಬಬ #ಯಕ್ಷ ಪ್ರಶ್ನೆ ಕಾಡುತ್ತಿದೆ. #ಶಶಿಧರ ಹೆಗ್ಡೆ ಎಂಬ ಜನಸ್ನೇಹಿ ನಾಯಕ ಇನ್ನೂ ತೆರೆಯ ಮರೆಯಲ್ಲಿಯೇ ಇದ್ದಾರೆ, ಪರಿಷತ್‌ ನಲ್ಲಿ ಕೊನೆವರೆಗೆ ಇದ್ದು ಫೋಟೊ ಫಿನಿಶಿಂಗ್‌ ನಲ್ಲಿ ಸಹ್ಯಾದ್ರಿಯ ಭಂಡಾರಿ ಎದುರು ತಲೆಬಾಗಿದರು.
ಈಗ ಇಲ್ಲೂ ಅಲಿ ಮತ್ತು ಬಾವ ಎದುರು ಇನ್ನೂ ಸರಿಯಾಗಿ ತಲೆ ಎತ್ತಿಲ್ಲ.
#ಡಿಕೆಶಿ ಪಾಳಯದ ಅಲಿ ಅವರಿಗೆ ಬಹುತೇಕ ಟಿಕೆಟ್‌ ಎಂದು ಪಕ್ಷದ ಪಡಸಾಲೆ ಮಾತ್ರವಲ್ಲ ಮಾಧ್ಯಮದ ಕೋಣೆಗಳಲ್ಲಿ ಜನರ ಮನೆ ಜಗುಲಿಗಳಲ್ಲಿ ಚರ್ಚೆಗಳಾಗುತ್ತಿರುವಾಗ ಸಹಜವಾಗಿ ಬಾವ ಆಸೆ ಕಳೆದುಕೊಂಡು #ಟುಸ್‌ ಆಗಿದ್ದರು.
ಇದೇ ಕಾರಣಕ್ಕೆ #ಸಿದ್ದರಾಮಮ್ಮ ಮೊನ್ನೆ ಮಂಗಳೂರಿಗೆ ಬಂದಾಗ ಬಾವ ಅವರು ವಿಷಣ್ಣ ವದನರಾಗಿ ಯಾರಿಗೆ ಟಿಕೆಟ್‌ ನೀಡಲಿ ನಾನು ಗೆಲುವಿಗೆ ಶ್ರಮಿಸುತ್ತೇನೆ ಎಂದು ಒಲ್ಲದ ಮನಸಲ್ಲಿ ಮೆಲ್ಲನೆ ಉಸುರಿದ್ದರು.
ಆಗ ಸಿದ್ದಣ ಬೇರೆಯವರನ್ನು ಗೆಲ್ಲಿಸುವುದಲ್ಲ ನಾನು ಗೆದ್ದು ಬರುತ್ತೇನೆ ಎಂದು ಹೇಳು ಎನ್ನುತ್ತಾ ಬಾವನ ಉರಿಯುತ್ತಿರುವ ಆಸೆಯ ಬೆಂಕಿಗೆ #ಪೆಟ್ರೋಲ್‌ ಸುರಿದಿದ್ದರು. ಆ ಬಳಿಕ ಬಾವ ಅವರ #ಖದರೇ ಬದಲಾಗಿದೆ, _ನನಗೆ ಟಿಕೆಟ್‌ ಗ್ಯಾರಂಟಿ ಎಂದು ಮತ್ತೆ ಹುಮ್ಮಸ್ಸಿಂದ ಕ್ಷೇತ್ರದಲ್ಲಿ ಸುತ್ತುತ್ತಿದ್ದಾರೆ.

ಆದರೆ ಕಾರ್ಯಕರ್ತರು ಮಾತ್ರ ಅಲಿ ಬಂದರೆ #ಜೀವಕಲೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಮೊನ್ನೆ ಬೈಕ್‌ ರ್ಯಾಲಿಯಲ್ಲಿ ಬಾವ ಕಾರ್ಯಕರ್ತರಿಗೆ ಪೆಟ್ರೋಲ್‌ಗೆ ಸರಿಯಾಗಿ ದುಡ್ಡು ಕೊಟ್ಟಿಲ್ಲ. ಕೊಟ್ರೂ ಕೇವಲ 1೦೦- 2೦೦ ರೂ. ಕೊಟ್ಟಿದ್ದಾರೆ. ಪಕ್ಕದ ಕ್ಷೇತ್ರಗಳಿಂದ ಬಂದ ಕಾರ್ಯಕರ್ತರಿಗೆ ಪೆಟ್ರೋಲ್‌ ಇಲ್ಲ, ಎಣ್ಣೆಯೂ ಇಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು.!

 

 

 

ಜತೆಗೆ ಉದ್ಯಮಿ ಇನಾಯತ್‌ ಅಲಿಯವರು ಒಬ್ಬೊಬ್ಬ ಕಾರ್ಯಕರ್ತಗೆ ಕಾಸ್ಟ್‌ಲೀ ಟಿಶರ್ಟ್‌ ( 8೦೦ ರೂ. ಅಂತ ಸುದ್ದಿ) ಕೊಡ್ಸಿದ್ದಾರೆ ಬಾವ ಅವರು 1೦೦ ರೂ. ಪೆಟ್ರೋಲ್‌ ಹಾಕಲು ಹಿಂದೇಟ್ ಹಾಕಿದ್ದಾರೆ
ಹೀಗಾಗಿ ಅಲಿಯವರಿಗೆ ಟಿಕೆಟ್‌ ಸಿಕ್ರೆ #ಝಣ ಝಣ ಹಣದಿಂದಾಗಿ #ರಣಕಣದಲ್ಲಿ ಬಸವಳಿದಿರುವ ಕಾರ್ಯಕರ್ತರಿಗೆ #ಆಕ್ಸಿಜನ್‌ ಸಿಕ್ಕಿ ವೀರಾವೇಶ ಬರಹುದು, ಯುದ್ಧದಲ್ಲಿ ಸಮಬಲರಾಗಿ ಕಾದಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನು ಕವಿತಾ #ಸನಿಲ್‌, ಪ್ರತಿಭಾ #ಕುಳಾಯಿ ಕೂಡಾ ಪ್ರತ್ಯೇಕವಾಗಿ ಟಿಕೆಟ್‌ ಗಾಗಿ ಹೋರಾಟ ನಡೆಸುತ್ತಿದ್ದಾರೆ, ಇವರ ಹೋರಾಟದ ಹಾದಿ ಮಾತ್ರ ವಿಭಿನ್ನವಾಗಿದೆ.

ಈ ಎಲ್ಲ ಹೋರಾಟಗಳ ಬಳಿಕ ಟಿಕೆಟ್‌ ಯಾರಿಗೆ ಸಿಗುವುದೋ ನೋಡಿ ಆಮೇಲೆ ತಮ್ಮ #ಖಜಾನೆಯಲ್ಲಿನ ಬಂಡಲ್ ಗಳ ಮೂಟೆಯನ್ನು ಯಾವ ರೀತಿ ಖಾಲಿ ಮಾಡಬೇಕು,
_ವಿರೋಧಿಗಳನ್ನು ಸೋಲಿಸಲು ಯಾವ #ಮದ್ದು ಅರೆಯಬೇಕು ಎಂದು ಡಾಕ್ಟ್ರು ಭರತ್ ಶೆಟ್ರು ತಲೆ ಕೆರೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *