Share this news

ಮೈಸೂರು: ಕಳೆದ ತಿಂಗಳು ಮಾರ್ಚ್​​ 11 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ  ವಿಧಿವಶರಾಗಿದ್ದಾರೆ. ಇದು ಇಡೀ ಕುಟುಂಬಕ್ಕೆ ಆಘಾತವುಂಟು ಮಾಡಿತ್ತು. ನಂತರ ಆರ್​.ಧ್ರುವನಾರಾಯಣ ಪುತ್ರ ದರ್ಶನ್​ ಧ್ರುವನಾರಾಯಣ  ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದೆ.

ಈ ಖುಷಿಯಲ್ಲಿದ್ದ ಕುಟುಂಬಕ್ಕೆ ಈಗ ಮೊತ್ತೊಂದು ಆಘಾತವುಂಟಾಗಿದೆ. ಪತಿ ದಿವಂಗತ ಆರ್​​.ಧ್ರುವನಾರಾಯಣ ನಿಧನರಾಗಿ ಒಂದು ತಿಂಗಳು ಕಳೆಯುವದರ ಒಳಗಾಗಿ ಪತ್ನಿ ವೀಣಾ ಧ್ರುವನಾರಾಯಣ್  ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಇಂದು (ಏ.7) ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು ಎಳೆದಿದ್ದಾರೆ.

Leave a Reply

Your email address will not be published. Required fields are marked *