ನವದೆಹಲಿ:ಸಂಸತ್ತಿನ ರಾಜ್ಯಸಭಾ ಅಧಿವೇಶನದಲ್ಲಿ ಶುಕ್ರವಾರದಂದು ಊಟದ ವಿರಾಮದ ಜತೆಗೆ ಅರ್ಧ ತಾಸು ಹೆಚ್ಚುವರಿ ವಿರಾಮ ನೀಡಲಾಗುತ್ತಿತ್ತು. ಆದರೆ ಇದೀಗ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ನಮಾಜ್ ಸಮಯವನ್ನು ರದ್ದುಪಡಿಸಿ ಅದನ್ನು ಲೋಕಸಭೆ ಕಲಾಪಕ್ಕೆ ಹೊಂದಿಸಿ ಆದೇಶ ಹೊರಡಿಸಿದ್ದಾರೆ.
ಅವರು ಈ ಕುರಿತು ಡಿಸೆಂಬರ್ 8 ರಂದು ಸದನಕ್ಕೆ ಮಾಹಿತಿ ನೀಡಿದ್ದು, ಶುಕ್ರವಾರದ ಸದನದ ಸಮಯವನ್ನು ಲೋಕಸಭೆಯ ಸಮಯಕ್ಕೆ ಹೊಂದಿಸುವಂತೆ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಶುಕ್ರವಾರ ರಾಜ್ಯಸಭೆಯಲ್ಲಿ ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. ಆದರೆ, ಈ ಬಾರಿ 2 ಗಂಟೆಗೆ ನಿಗದಿ ಮಾಡಿರುವ ಬಗ್ಗೆ ಡಿಎಂಕೆ ಸಂಸದ ತಿರುಚಿ ಎನ್ ಶಿವ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ, ಮುಸ್ಲಿಂ ರಾಜ್ಯಸಭಾ ಸದಸ್ಯರು ನಮಾಜ್ ಮಾಡಲು ಅನುವು ಮಾಡಿಕೊಡಲು ಶುಕ್ರವಾರದಂದು 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದರು. ರಾಜ್ಯಸಭೆಯ ಕಲಾಪಗಳು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ನಡೆಯುತ್ತದೆ. ಮಧ್ಯಾಹ್ನ 1 ರಿಂದ 2ರವರೆಗೆ ಭೋಜನ ವಿರಾಮವಿರುತ್ತದೆ. ಆದರೆ, ಶುಕ್ರವಾರ ಮಾತ್ರ 2 ಗಂಟೆಯ ಬದಲಾಗಿ 2.30ಕ್ಕೆ ಕಲಾಪ ಆರಂಭವಾಗುತ್ತಿತ್ತು. ಈ ಬಗ್ಗೆ ಎಲ್ಲೂ ಉಲ್ಲೇಖವಾಗದೇ ಇದ್ದರೂ, ಶುಕ್ರವಾರದ ನಮಾಜ್ಗಾಗಿ 30 ನಿಮಿಷಗಳ ಹೆಚ್ಚುವರಿ ಭೋಜನ ವಿರಾಮವನ್ನು ನೀಡಲಾಗುತ್ತಿತ್ತು. ಈ ವಿಚಾರವನ್ನು ಡಿಎಂಕೆ ಸಂಸದ ಶುಕ್ರವಾರದ ರಾಜ್ಯಸಭೆಯ ಶೂನ್ಯವೇಳೆಯ ವೇಳೆ ಪ್ರಶ್ನೆ ಮಾಡಿದ್ದರು. ಪಾಯಿಂಟ್ ಆಫ್ ಆರ್ಡರ್ನಲ್ಲಿ ರಾಜ್ಯಸಭೆಯ ಕಲಾಪ 2 ಗಂಟೆಗೆ ಆರಂಭವಾಗಿದ್ದರ ಬಗ್ಗೆ ಪ್ರಶ್ನೆ ಎತ್ತಿದ್ದರು.ಇದಕ್ಕೆ ಉತ್ತರ ನೀಡಿದ ಧನ್ಕರ್, ಇದು ಈ ಶುಕ್ರವಾರ ಪ್ರಾರಂಭವಾಗಿಲ್ಲ, ಮತ್ತು ಇದು ಕೆಲವು ಸಮಯದಿಂದ ಆಚರಣೆಯಲ್ಲಿದೆ.ಗೌರವಾನ್ವಿತ ಸದಸ್ಯರೇ, ಇಂದಿನಿಂದ ಇದನ್ನು ಮಾಡುತ್ತಿಲ್ಲ. ಇದನ್ನು ನಾನು ಮೊದಲೇ ಮಾಡಿದ್ದೇನೆ ಮತ್ತು ಕಾರಣವನ್ನು ನೀಡಲಾಗಿದೆ, ಎಂದು ಅವರು ಹೇಳಿದರು.
ಶುಕ್ರವಾರದ ಸಮಯವನ್ನು ಲೋಕಸಭೆಯ ಸಮಯದೊಂದಿಗೆ ಮರು ಹೊಂದಿಸಲಾಗಿದೆ. ಲೋಕಸಭೆಯಲ್ಲಿ ನಮಾಜ್ ಬ್ರೇಕ್ಗಳನ್ನು ಶುಕ್ರವಾರ ಪಾಲಿಸುತ್ತಿಲ್ಲ, ಇದು ಕೇವಲ ರಾಜ್ಯಸಭೆಯಲ್ಲಿ ಇದ್ದ ಅಭ್ಯಾಸ ಮಾತ್ರವೇ ಆಗಿತ್ತು. ಲೋಕಸಭೆ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸಂಸತ್ತಿನ ಪ್ರಮುಖ ಭಾಗಗಳು. ನಿಲ್ಲಿನ ಸಮಯ ಹಾಗೂ ನಿಮಯಗಳಿಗೆ ಎರಡೂ ಅನುಗುಣವಾಗಿರಬೇಕು. ನಾನೇ ಈ ಮೊದಲು ಹೇಳಿದಂತೆ ಶುಕ್ರವಾರವೂ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭವಾಗುತ್ತದೆ. ಇದು ಇಂದಿನದಲ್ಲ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆಯ ಮತ್ತೊಬ್ಬ ಸಂಸದ ಎಂ.ಮೊಹಮದ್ ಅಬ್ದುಲ್ಲಾ, ಇದು ಬಹಳ ವರ್ಷಗಳಿಂದ ಇರುವ ಅಭ್ಯಾಸವಾಗಿದೆ. 60-70 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಶುಕ್ರವಾರದ ಜುಮ್ಮಾ ಕಾರಣಕ್ಕಾಗಿ ಮುಸ್ಲಿಂ ಸಂಸದರ ಸಲುವಾಗಿ ಇದನ್ನು ಫಿಕ್ಸ್ ಮಾಡಲಾಗಿತ್ತು. ಇದು ಮೊದಲಿನಿಂದಲೂ ಇದ್ದ ಅಭ್ಯಾಸ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಎಲ್ಲಾ ಸಮುದಾಯಗಳ ಸದಸ್ಯರಿದ್ದಾರೆ ಮತ್ತು ಮುಸ್ಲಿಂ ಸಂಸದರಿಗೆ ಮಾತ್ರ ನಿರ್ದಿಷ್ಟ ವಿನಾಯಿತಿ ಇರಬಾರದು ಎಂದು ಧನ್ಕರ್ ತಿಳಿಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಮಾಜದ ಎಲ್ಲಾ ವರ್ಗಗಳ ಸದಸ್ಯರನ್ನು ಇರುತ್ತಾರೆ. ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಇರುತ್ತದೆ. ಪ್ರತೀ ವಿಭಾಗದಿಂದ ಸದಸ್ಯರಿದ್ದಾರೆ. ಪ್ರಜ್ಞಾಪೂರ್ವಕವಾಗಿ, ಸೂಕ್ತ ಚರ್ಚೆಯ ನಂತರ, ನಾನು ಅದನ್ನು ಜಾರಿಗೆ ತಂದಿದ್ದೇನೆ, ಸದನಕ್ಕೆ ಸೂಚಿಸಿದ್ದೇನೆ ಮತ್ತು ಇದು ಕಳೆದ ಅಧಿವೇಶನದಲ್ಲೇ ಇದು ಜಾರಿಯಲ್ಲಿತ್ತು. ಮಧ್ಯಾಹ್ನ 2 ಗಂಟೆಗೆ ಊಟದ ನಂತರ ಸದನ ಸೇರಲಿದೆ ಎಂದು ತಿಳಿಸಲಾಗಿದೆ.ಲೋಕಸಭೆಯು ಸೂಚಿಸಿದ ಕಾಲಮಿತಿಗೆ ನಾವೂ ಅನುಗುಣವಾಗಿರಬೇಕು ಎಂದು ತಿಳಿಸಿದ್ದಾರೆ. ಈ ಸಮಯ ಬದಲಾವಣೆಯನ್ನು ಕಳೆದ ಅಧಿವೇಶನದಲ್ಲಿ ಜಾರಿಗೆ ತರಲಾಗಿದ್ದು, ಈಗಾಗಲೇ ಸದಸ್ಯರಿಗೆ ವಿವರಿಸಲಾಗಿದೆ ಎಂದು ಸಭಾಪತಿ ಪುನರುಚ್ಚರಿಸಿದ ನಂತರ, ಸದಸ್ಯರಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.