Share this news

ಕಾರ್ಕಳ: ಜಂಟೀ ಪಾಲುದಾರಿಕೆಯಲ್ಲಿ ನಡೆಸಿದ ಉದ್ಯಮದಲ್ಲಿ ಇಬ್ಬರು ಮಹಿಳಾ ಉದ್ಯಮಿಗಳ ನಡುವೆ ಹಣಕಾಸಿನ ವಿಚಾರದಲ್ಲಿ ತಕರಾರು ನಡೆದಿದ್ದು, ಬಳಿಕ ಮಾತಿನ ಚಕಮಕಿ ನಡೆದ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಮಂದ್ರಪಾಲ್ ಎಂಬಲ್ಲಿ ಪಾವನಿ ಮತ್ತು ಅಕ್ಷತಾ ಎಂಬವರು ಜಂಟೀ ಪಾಲುದಾರಿಕೆಯಲ್ಲಿ ಪಶು ಆಹಾರ ಘಟಕ ಆರಂಭಿಸಿದ್ದರು. ಬಳಿಕ ಇವರ ಮಧ್ಯೆ ಹಣಕಾಸಿನ ವಿಚಾರದಲ್ಲಿ ಜ.27ರಂದು ಪರಸ್ಪರ ಜಗಳವಾಗಿತ್ತು. ಅಕ್ಷತಾ ಎಂಬವರು ಪಾವನಿಯವರ ಸುಪರ್ದಿಯಲ್ಲಿದ್ದ 60 ಸಾವಿರ ಮೌಲ್ಯದ ಪಶು ಆಹಾರ ಘಟಕ ಯಂತ್ರವನ್ನು ಕಳುವುಗೈದಿದ್ದಾರೆ, ಇದಕ್ಕೆ ಪಾವನಿಯವರು ಆಕ್ಷೇಪಿಸಿದಾಗ ಆಪಾದಿತೆ ಅಕ್ಷತಾ ಪಾವನಿಯವರ ಮನೆಗೆ ಬಂದು ಜಗಳವಾಡಿ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಪಾವನಿಯವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

Leave a Reply

Your email address will not be published. Required fields are marked *