Share this news

ಕಾರ್ಕಳ:ಪತಿ ತನ್ನ ಮನೆಗೆ ಬರುವುದನ್ನು ಆಕ್ಷೇಪಿಸಿ ಪತ್ನಿಯೇ ಆತನಿಗೆ ಅವಾಚ್ಯ ಪದಗಳಿಂದ ನಿಂದಿಸಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿ ಶನಿವಾರ ನಡೆದಿದೆ.
ಸುರೇಶ ಪೂಜಾರಿ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಮನೆಗೆ ಹೋದಾಗ ಪತ್ನಿ ಪ್ರಶಾಂತಿಯವರು ಪತಿ ಸುರೇಶ್ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಕಬ್ಬಿಣದ ಲಿವರ್‌ನಿಂದ ತಲೆಗೆ, ಕೈಗಳಿಗೆ ಹಲ್ಲೆ ನಡೆಸಿ, ಇನ್ನು ಮುಂದಕ್ಕೆ ಮನೆಗೆ ಬಂದರೆ ಕೊಂದು ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪತಿ ಸುರೇಶ್ ಪೂಜಾರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ ಪ್ರಶಾಂತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

 

 

Leave a Reply

Your email address will not be published. Required fields are marked *