ಕಾರ್ಕಳ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಮುದಾಯವು ಆರಾಧಿಸುತ್ತಿರುವ ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕ ಜಗದೀಶ್ ಭಟ್(56ವ) ಸೋಮವಾರ ಮಧ್ಯಾಹ್ನ ದೇವಸ್ಥಾನದಲ್ಲಿ ತೀವ್ರ ಹೃದಯಾಘಾತದಿಂದ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.ಈ ಮೂಲಕ ಬ್ರಹ್ಮಕಲಶೋತ್ಸವ ಹೊಸ್ತಿಲಲ್ಲೇ ಸೂತಕದ ಛಾಯೆ ಆವರಿಸಿದೆ.
ಮಹಾಲಕ್ಷ್ಮೀ ದೇವಸ್ಥಾನವು 35 ವರ್ಷಗಳ ಬಳಿಕ ಜೀರ್ಣೋದ್ಧಾರಗೊಂಡು ಇದೀಗ ಬ್ರಹ್ಮಕಲಶೋತ್ಸಕ್ಕೆ ಸಜ್ಜಾಗಿದೆ.ಇನ್ನೇನು ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲೇ ಅರ್ಚಕ ಜಗದೀಶ್ ಭಟ್ ಅವರು ಹಠಾತ್ ವಿಧಿವಶರಾಗಿರುವುದು ಅಡಳಿತ ಮಂಡಳಿ ಹಾಗೂ ಸಮಸ್ತ ಭಜಕವೃಂದವು ದಿಗ್ಬ್ರಮೆಗೊಂಡಿದ್ದಾರೆ.
ಮೇ.5 ರಿಂದ ಮೇ 12ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಮೇ.4 ರಂದು ಹಸಿರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಅರ್ಚಕರು ಪಾಲ್ಗೊಂಡಿದ್ದರು.