Share this news

ಬೆಂಗಳೂರು :ಕಳೆದ 2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಂಟ್ವಾಳದಲ್ಲಿ ಮಾಡಿದ್ದ ವಿವಾದಾತ್ಮಕ ಭಾಷಣದ ಕುರಿತು ಮಾಜಿ ಸಚಿವ ವಿ.ಸುನೀಲ್ ಕುಮಾರ್ ವಿರುದ್ಧ ಬಿಸಿ ರೋಡ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಕುರಿತ ಪೊಲೀಸರ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಿಸಿ ರೋಡ್ ಸಮೀಪದ ಕಲ್ಲಡ್ಕದಲ್ಲಿ
ರಾಜೇಶ್ ನಾಯ್ಕ್‌ ಪರ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ ಪ್ರಖರ ಭಾಷಣ ಮಾಡಿದ್ದ ಸುನೀಲ್ ಕುಮಾರ್ ರಾಮಬೇಕೋ, ಅಲ್ಲಾಹ್ ಬೇಕೋ ? ಎಂದು ನೀವೇ ನಿರ್ಧರಿಸಿ ಎಂದಿದ್ದರು.
ಈ ಹೇಳಿಕೆ ವಿರುದ್ಧ ಅಂದಿನ ಸಚಿವ ರಮಾನಾಥ್ ರೈ‌ ಪೊಲೀಸರ ಮೇಲೆ ಒತ್ತಡ ಹೇರಿ ಎಫ್ ಐಆರ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬಿ.ಸಿ.ರೋಡ್ ಪೊಲೀಸರು ಇತ್ತೀಚೆಗೆ ಆರೋಪಟ್ಟಿ ದಾಖಲಿಸಿ ವಿಚಾರಣೆ ಪ್ರಾರಂಭಿಸಿದ್ದರು. ಇದಕ್ಕೆ ತಡೆ ನೀಡುವುಂತೆ ಸುನೀಲ್ ಕುಮಾರ್ ಪರ ವಕೀಲ ಮಹೇಂದ್ರ ಹೈಕೋರ್ಟ್ ಮೊರೆ ಹೋಗಿದ್ದು, ಮಂಗಳವಾರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

 

 

 

 

 

Leave a Reply

Your email address will not be published. Required fields are marked *