Share this news

ಬೆಂಗಳೂರು: ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಸದಾಶಿವ ಶೆಟ್ಟಿಯವರನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕಾನೂನುಬಾಹಿರ ಆದೇಶದ ಮೂಲಕ ರಾಜಕೀಯ ಒತ್ತಡದಿಂದ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ ಬಗ್ಗೆ ಬಿ.ಸದಾಶಿವ ಶೆಟ್ಟಿಯವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಾಪೀಠವು ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹೊರಡಿಸಿದ್ದ ಅನರ್ಹತೆಯ ಆದೇಶವನ್ನು ರದ್ದುಗೊಳಿಸಿದೆ.

ಅರೆನ್ಯಾಯಿಕ ಪೀಠವಾದ ಸಹಕಾರಿ ಸಂಘಗಳ ನ್ಯಾಯಾಲಯ ಆದೇಶ ಪ್ರಕಟಿಸುವಾಗ ಕೆಲವೊಂದು ಮಾನದಂಡವನ್ನು ಪಾಲಿಸುವುದು ಮತ್ತು ಆನ್ ಲೈನ್ ಮೂಲಕ ಅರ್ಜಿದಾರರಿಗೆ ಮತ್ತು ಪ್ರತಿವಾದಿಗಳಿಗೆ ಸರಿಯಾದ ಮಾಹಿತಿ ನೀಡುವ ಕ್ರಮಕೈಗೊಳ್ಳಬೇಕೆಂದು ಈ ಪ್ರಕರಣದ ಮೂಲಕ ಆದೇಶಿಸಿದ ನ್ಯಾಯಾಲಯ ಸರಕಾರದ ಮುಖ್ಯಕಾರ್ಯದರ್ಶಿಗೆ ಸೂಕ್ತ ನಿರ್ದೇಶನವನ್ನು ನೀಡಿದೆ.

ಸರ್ಕಾರ ಕೈಗೊಂಡ ಕ್ರಮದ ಬಗ್ಗೆ 4 ವಾರಗಳಲ್ಲಿ ವರದಿಯನ್ನು ನೀಡುವಂತೆ ಹೈಕೋರ್ಟ್ ನ್ಯಾಯಾಪೀಠವು ಸರಕಾರಕ್ಕೆ ಆದೇಶಿಸಿದೆ.
ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಾನೂನು ಸಮ್ಮತವಲ್ಲದ ಈ ಆದೇಶವನ್ನು ನ್ಯಾಯಾಲಯವು ರದ್ದುಪಡಿಸಿದ್ದು, ಇದರಿಂದ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

 

 

 

 

 

 

 

 

Leave a Reply

Your email address will not be published. Required fields are marked *