
ಕಾರ್ಕಳ, ನ.06: ಮರ್ಣೆ ಗ್ರಾಮದ ಅಜೆಕಾರು ಭೂತಮಾರ್ ನಿವಾಸಿ ಶೀಲಾ ಶೆಟ್ಟಿ(80ವ) ಅವರು ಮಂಗಳವಾರದಂದು ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಅವರು ಅಲ್ಪಕಾಲದ ಅಸೌಖ್ಯದಿಂದ ಭೂತಮಾರ್ ಸ್ವಗೃಹದಲ್ಲಿ ನಿಧನರಾದರು.
ಮೃತ ಶೀಲಾ ಶೆಟ್ಟಿಯವರು ಮುಂಬಯಿ ಹೊಟೇಲ್ ಉದ್ಯಮಿ ಸತೀಶ್ ಶೆಟ್ಟಿ ಸೇರಿದಂತೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

