ಹೆಬ್ರಿ: ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿ ನಿವೃತ್ತಿಯಾಗಿದ್ದ ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಾಸುದೇವ ಪುತ್ತಿ ಎಂಬವರು ದುಪ್ಪಟ್ಟು ಹಣದ ಆಸೆಗೆ ಬಲಿಯಾಗಿ ನಕಲಿ ಕಂಪನಿಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ವಾಸುದೇವ ಪುತ್ತಿಯವರು ಕಳೆದ 1995 ರಿಂದ ಬೆಂಗಳೂರಿನ ಜಿಗಣಿಯಲ್ಲಿ ಎ,ಎಫ್,ಡಿ,ಸಿ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜರ್ ಆಗಿ 2020 ರಲ್ಲಿ ನಿವೃತ್ತಿಯಾಗಿದ್ದರು. ವಾಸುದೇವ ಪುತ್ತಿಯವರ ನಿವೃತ್ತಿಯ ಬಳಿಕ ಅವರ ಪರಿಚಯದ ಮೈಲಾರಿ ಆಗ್ರೋ ಪ್ರೋಡಕ್ಟ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಕೆ ವಾಸುದೇವ ಅವರನ್ನು ಸಂಪರ್ಕಿಸಿ ಕಂಪೆನಿಯಲ್ಲಿ ಹೂಡಿಕೆ ವೆಸ್ಟ್ ಮಾಡುವಂತೆ ನಂಬಿಸಿ ಆತನ ಕಂಪೆನಿಯಲ್ಲಿ 14/09/2021 ರಿಂದ 28/01/2022 ರವರೆಗೆ ಒಟ್ಟು ನಾನು 5.50 ಲಕ್ಷ ಹಣವನ್ನು ಹೂಡಿಕೆ ಮಾಡಿದ್ದರು. ಈ ಹಣಕ್ಕೆ ಹೆಚ್ಚುವರಿಯಾಗಿ 2,50,000 ರೂ ಹಣ ಬಡ್ಡಿ ನೀಡಿ ಬಳಿಕ ಕಂಪೆನಿ ಮುಚ್ಚಿತ್ತು. ಇದಾದ ಬಳಿಕ
2024 ರ ಸೆಪ್ಟೆಂಬರ್ ತಿಂಗಳಲ್ಲಿ ರೋಹಿತ್ ಮತ್ತೆ ವಾಸುದೇವ ಪುತ್ತಿಯವರನ್ನು ಸಂಪರ್ಕಿಸಿ ಕಂಪೆನಿಯಿಂದ ಹೂಡಿಕೆ ಮಾಡಿದವರಿಗೆ ಹಣ ಕೊಡಲು ಕಂಪನಿಯವರು ದೊಡ್ಡ ಮೊತ್ತದ ಹಣ ನೀಡಿದ್ದಾರೆ. ಹಣವನ್ನು ಕೊಡುವ ಪ್ರಕ್ರಿಯೆಗೆ ಹಣ ಖರ್ಚಾಗುತ್ತದೆ ಎಂದು ಮತ್ತು ಆದಾಯ ತೆರಿಗೆ ಅಧಿಕಾರಿಯವರಿಗೆ ಹಣ ಕೊಡಲು ಇದೆ ಎಂದು ಅವರ ಚಾಲಕರ ನಾಗರಾಜ ಹಾಗೂ ಜಗದೀಶರವರ ಖಾತೆಗೆ ಮತ್ತು ತನ್ನ ತಮ್ಮ ಪ್ರದೀಪನ ಖಾತೆಗೆ ಹಣ ಹಾಕುವಂತೆ ಹೇಳಿ ರೋಹಿತ್ ಮೋಸ ಮಾಡುವ ಉದ್ದೇಶದಿಂದ ಹೆಚ್ಚಿನ ಹಣ ಕೊಡುವುದಾಗಿ ಆಮಿಷ ತೋರಿಸಿ ನಂಬಿಸಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 31,58,452 ರೂ ಹಣವನ್ನು ಪೋನ್ ಪೇ ಹಾಗೂ ಗೂಗಲ್ ಪೆ, ಹಾಗೂ ನೆಪ್ಟ್ ಬ್ಯಾಂಕಿಂಗ್ ಮೂಲಕ ಹಾಕಿಸಿಕೊಂಡು ಹಣವನ್ನು ವಾಪಾಸು ಕೊಡದೇ, ಹಣ ವಾಪಾಸು ಕೇಳಿದಾಗ ಬೆದರಿಕೆ ಹಾಕಿ ನಂತರ ಸಂಪರ್ಕಕ್ಕೆ ಸಿಗದೇ ಮೋಸ ಮಾಡಿದ್ದಾರೆ ಎಂದು ವಾಸುದೇವ ಪುತ್ತಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದುಪ್ಪಟ್ಟು ಹಣದ ಆಸೆಗೆ ಬಲಿಯಾಗಿ ತಾನು ದುಡಿದ ಹಣವನ್ನು ಕಳೆದುಕೊಂಡು ವಾಸುದೇವ ಪುತ್ತಿ ಕಂಗಾಲಾಗಿದ್ದಾರೆ.