ಕಾರ್ಕಳ: ವೇದ, ಪುರಾಣ ಮಹಾಭಾರತ ಇಂತಹ ಗ್ರಂಥಗಳ ಮಹತ್ವಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುವ ಹಾಗೂ ದೇಶದ ನೆಲದ ಬಗ್ಗೆ ಅಭಿಮಾನ ಇರುವ ಚಕ್ರವರ್ತಿ ಸೂಲಿಬೆಲೆಯವರ ಭಾಷಣಕ್ಕೆ ಸರ್ಕಾರ ನಿರ್ಬಂಧ ವಿಧಿಸಿರುವುದು ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಹೇಳಿದ್ದಾರೆ.
ಚಕ್ರವರ್ತಿ ಸೂಲಿಬೆಲೆಯವರು ತಮ್ಮ ಉಪನ್ಯಾಸ ಮಾಲಿಕೆಗಳಲ್ಲಿ ಲೇಖನಗಳಲ್ಲಿ ಎಲ್ಲಿಯೂ ವೈಯಕ್ತಿಕವಾಗಿ ಯಾರನ್ನು ತೇಜೋವಧೆ ಅಥವಾ ಅವಹೇಳನ ಮಾಡಿಲ್ಲ ಹಾಗೂ ಅವರು ತಮ್ಮ ದೇಶದ ಬಗ್ಗೆ ನಮ್ಮ ನೆಲದ ಬಗ್ಗೆ ನಮ್ಮ ಧಾರ್ಮಿಕ ಸಾಂಸ್ಕೃತಿಯ ವೈಭವದ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ತನ್ನ ಮಾತಿನ ಮೂಲಕ ಭಾರತವನ್ನು ಅಖಂಡ ಭಾರತವಾಗಿ ಒಂದು ಪರಿಕಲ್ಪನೆಗೆ ತರುವಂತಹ ವ್ಯಕ್ತಿ.
ಎಂದು ಕೂಡ ದೇಶದ್ರೋಹದ ಹೇಳಿಕೆಯನ್ನು ಕೊಟ್ಟಿಲ್ಲ ದೇಶ ಅಸ್ಮಿತೆಯ ಬಗ್ಗೆ ಮಾತನಾಡಿರುತ್ತಾರೆ ಹಾಗಾಗಿ ಅವರ ಮಾತಿನ ಬಗ್ಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ ತಕ್ಷಣವೇ ಈ ನಿರ್ಬಂಧ ತೆರವುಗೊಳಿಸಬೇಕೆಂದು ರಮಿತಾ ಶೈಲೇಂದ್ರ ಆಗ್ರಹಿಸಿದ್ದಾರೆ.