ಹೆಬ್ರಿ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಶಾಂತಿಭAಗ ಮಾಡಿದ ಅರೋಪದಡಿ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ ಠಾಣಾ ಎಸೈ ಮಹೇಶ್ ಟಿ.ಎಮ್ ಅವರು ಜ.10 ರಂದು ಹೆಬ್ರಿ ಜಂಕ್ಷನ್ನಲ್ಲಿ ರೌಂಡ್ಸ್ ನಲ್ಲಿರುವಾಗ ಮದ್ಯಾಹ್ನ ಹೆಬ್ರಿ ಗ್ರಾಮದ ಹೆಬ್ರಿ-ಕಾರ್ಕಳ ಮುಖ್ಯ ರಸ್ತೆಯ ಶಾರದಾ ಜನರಲ್ ಸ್ಟೋರ್ ಬಳಿ 4-5 ಜನರು ಸೇರಿಕೊಂಡು ಜೋರಾಗಿ ಬೊಬ್ಬೆ ಹಾಕುತ್ತಾ ಬೈದಾಡಿಕೊಂಡು ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಶಂಭು , ಧ್ರುವರಾಜ್ ,ಅರುಣ್ ಕುಮಾರ್, ಅಭಿಷೇಕ್ ಮತ್ತು ರಾಹುಲ್ ಎಂಬವರ ವಿರುದ್ದ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.