ಹೆಬ್ರಿ: ಬಸ್ಸು ಡಿಕ್ಕಿಯಾಗಿ ಗಾಯಗೊಂಡಿದ್ದ ಪಾದಾಚಾರಿ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಜೂ.11 ರ ಬುಧವಾರ ನಡೆದಿದೆ. ಹೆಬ್ರಿ ನಿವಾಸಿ ಶಂಕರ (71) ಮೃತಪಟ್ಟವರು.
ಶಂಕರ ಅವರು ಬುಧವಾರ ಸಂಜೆ 3.30ರ ವೇಳೆಗೆ ಹೆಬ್ರಿ ಜಂಕ್ಷನ್ ಕಡೆಯಿಂದ ರಸ್ತೆ ಬಲ ಬದಿಯಲ್ಲಿ ಪುಟ್ ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಶಿವಮೊಗ್ಗ ಕಡೆಯಿಂದ ಬಂದ ಶೋಬಿತ್ ಹೆಸರಿನ ಖಾಸಗಿ ಬಸ್ಸು ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.