
ನ್ಯೂಯಾರ್ಕ್, ಡಿ.23:ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂಸಾಚಾರ ನಡೆದಾಗೆಲ್ಲ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಲೇ ಇರುತ್ತದೆ. ಮೊನ್ನೆಯ ಹಿಂಸಾಚಾರದಲ್ಲಿ ಉದ್ರಿಕ್ತರ ಗುಂಪು ಗಾರ್ಮೆಂಟ್ ಕಾರ್ಮಿಕ ದೀಪು ಚಂದ್ರದಾಸ್ ಅವರನ್ನು ಹತ್ಯೆಗೈದು ಬಳಿಕ ಅವರ ಶವವನ್ನು ನೇಣಿಗೇರಿಸಿ ಸುಟ್ಟು ಹಾಕಿರುವ ಕುರಿತು ವಿಶ್ವಸಂಸ್ಥೆ ಇದೊಂದು ಆಘಾತಕಾರಿ ಹೇಯಕೃತ್ಯ ಎಂದು ಬಣ್ಣಿಸಿದೆ.
ಇತರ ಯಾವುದೇ ದೇಶದಂತೆ ಬಾಂಗ್ಲಾದೇಶದಲ್ಲಿ, ಬಹುಸಂಖ್ಯಾತರಿಗೆ ಸೇರದ ಜನರು ಸುರಕ್ಷಿತವಾಗಿರಬೇಕು ಎಂದು ಆಂಟೋನಿಯೊ ಗುಟೆರಸ್ ಹೇಳಿದರು, ಎಲ್ಲಾ ನಾಗರಿಕರಿಗೆ ಭದ್ರತೆ ಅತ್ಯಗತ್ಯ ಎಂದು ಒತ್ತಿ ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶ ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು.


.
.
