Share this news

 

 

 

ಕಾರ್ಕಳ,ಫೆ09: ಮನೆಮನೆಯ ಕಸವನ್ನು ವಿಂಗಡಣೆ ಮಾಡಿ ಪೌರ ಕಾರ್ಮಿಕರಿಗೆ ಕೊಡಬೇಕೆಂಬ ನಿಯಮವಿದ್ದರೂ ಕಾರ್ಕಳದ ತಾಲೂಕು ಕಚೇರಿ ಬಳಿಯ ಟೈಟಾನಿಕ್ ಅಪಾರ್ಟ್ಮೆಂಟ್ ವಾಸಿಗಳು ಮಾತ್ರ ಈ ನಿಯಮಪಾಲನೆ ಮಾಡದೇ ಕಸವನ್ನು ಪುರಸಭೆಯ ಪೌರ ಕಾರ್ಮಿಕರಿಗೆ ನೀಡುತ್ತಿದ್ದು, ಇಂತಹ ಕಸವನ್ನು ಸಂಗ್ರಹಿಸಲು ಪೌರ ಕಾರ್ಮಿಕರು ನಿರಾಕರಿಸಿದ್ದರು. ಕಸವನ್ನು ವಿಂಗಡಣೆ ಮಾಡಿ ಕೊಡಬೇಕೆಂದು ಮನವಿ ಮಾಡಿದರೂ ಫ್ಲಾಟ್ ಮಾಲೀಕರು ಉಡಾಫೆಯಿಂದ ವರ್ತಿಸಿದ್ದು, ಕಸವನ್ನು ರಸ್ತೆಯ ಬದಿಯಲ್ಲೇ ಸುರಿದ್ದು ಉದ್ಧಟತನ ತೋರಿಸಿದ್ದು, ಇದರ ವಿರುದ್ಧ ಕಾರ್ಕಳ ಪುರಸಭೆ ಅಧಿಕಾರಿಗಳು ಗರಂ ಆಗಿದ್ದಾರೆ.
ಟೈಟಾನಿಕ್ ಎಂಬ ಹೆಸರಿನ ವಸತಿ ಸಮುಚ್ಚಯದಲ್ಲಿ ಸುಮಾರು 13 ಮನೆಗಳಿದ್ದು ಅವರು ನಿತ್ಯ ಬಳಸುವ ಹಸಿ ಹಾಗೂ ಒಣ ಕಸವನ್ನು ವಿಂಗಡಿಸದೇ ಎಲ್ಲವನ್ನು ಒಂದೇ ಚೀಲದಲ್ಲಿ ತುಂಬಿಸಿ ಪುರಸಭೆಯ ವಾಹನಕ್ಕೆ ಕೊಡುತ್ತಿದ್ದರು. ಕಸವನ್ನು ವಿಂಗಡಿಸಿ ಕೊಡುವಂತೆ ಪೌರ ಕಾರ್ಮಿಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಫ್ಲಾಟ್ ಮಾಲೀಕರು ಮಾತ್ರ ಕ್ಯಾರೇ ಮಾಡಿಲ್ಲವೆನ್ನುವುದು ಅಧಿಕಾರಿಗಳ ಆರೋಪ. ಕಸ ವಿಂಗಡಣೆಗೆ ಒಪ್ಪದೇ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ಪರಿಣಾಮ ಹಸಿ ತ್ಯಾಜ್ಯ ಕೊಳೆತು ವಾಸನೆ ಬರಲಾರಂಭಿಸಿದೆ. ಇದರಿಂದ ಸ್ಥಳೀಯರು ಕಾರ್ಕಳ ಪುರಸಭೆಗೆ ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ಸ್ಥಳಕ್ಕೆ ಧಾವಿಸಿ ಫ್ಲಾಟ್ ನಿವಾಸಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮನೆಯ ಕಸವನ್ನು ಸರಿಯಾಗಿ ವಿಂಗಡಿಸದೇ ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿದ ಮನೆಗಳ ಮಾಲೀಕರ ವಿರುದ್ಧ ದಂಡದ ಎಚ್ಚರಿಕೆ ನೀಡಿದ್ದಾರೆ. ಇದಲ್ಲದೇ ಮುಂದೆ ಕಸ ವಿಂಗಡಿಸಿ ಕೊಡುವಂತೆ ಸೂಚಿಸಿ ಅಪಾರ್ಟ್ಮೆಂಟ್ ಮಾಲೀಕರಿಗೆ 2 ಸಾವಿರ ದಂಡ ವಿಧಿಸಿದ್ದಾರೆ.

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

ಕಾರ್ಕಳ,ಫೆ.9:ಜೆ ಸಿ ಐ ಕಾರ್ಕಳ ಮತ್ತು ಬಂಡಿಮಠ ಫೌಂಡೇಶನ್ ಕಾರ್ಕಳ ಇದರ ಸಹಭಾಗಿತ್ವದಲ್ಲಿ ಕಾರ್ಕಳ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ 3 ಸಿಂಟೆಕ್ಸ್ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸೋಮಶೇಖರ್, ಜೆಸಿಐ ಕಾರ್ಕಳದ ಅಧ್ಯಕ್ಷ ಜೆಸಿ ಅವಿನಾಶ್ ಶೆಟ್ಟಿ, ಕಾರ್ಕಳ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಜೆ ಸಿ ಐ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕರಾದ ವಿಘ್ನೇಶ್ ಪ್ರಸಾದ್, ಜೆ ಸಿ ಐ ಕಾರ್ಕಳದ ಉಪಾಧ್ಯಕ್ಷ ರಿಜ್ವಾನ್ ಖಾನ್, ಜೆ ಸಿ ಐ ಕಾರ್ಕಳ ಕಾರ್ಯದರ್ಶಿ ಸುಶಾಂತ್ ಶೆಟ್ಟಿ,
ಜೆಸಿಐ ಕಾರ್ಕಳದ ಕೋಶಾಧಿಕಾರಿ ಮಂಜುನಾಥ್ ರಾವ್ ಪೂರ್ವಾಧ್ಯಕ್ಷ ರೋಷನ್ ಡಿ ಮಲ್ಲೋ ಹಾಗೂ
ಅರುಣೋದಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ, ಅರುಣೋದಯ ವಿಶೇಷ ಶಾಲೆ ಶಿಕ್ಷಕರಾದ ಗಿರೀಶ್ ಅಶ್ರೀತ್, ಕಾಂತಮ್ಮ, ಪ್ರತಿಮಾ ಹಾಗೂ ಸಿಬ್ಬಂದಿವರ್ಗ, ವಿಶೇಷ ಮಕ್ಕಳು ಉಪಸ್ಥಿತರಿದ್ದರು.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *