ಕಾರ್ಕಳ:ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮಾಯೋಜನೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಕಾರ್ಕಳ ಪುರಸಭಾ ವ್ಯಾಪ್ತಿಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮಾ ಸೌಲಭ್ಯ ದೊರಕಲಿದೆ. ಪ್ರತೀ ಹೆಕ್ಟೇರ್ ಅಡಿಕೆ ಬೆಳೆಗೆ ರೂ. 128000.00 (ಪ್ರತೀ ಎಕರೆಗೆ ರೂ.51822)ವಿಮಾಮೊತ್ತವಾಗಿದ್ದು, ರೈತರಪಾಲಿನ ವಿಮಾ ಕಂತು ರೂ. 6400.00 (ಪ್ರತಿಎಕರೆಗೆರೂ. 2592)ಆಗಿರುತ್ತದೆ.
ಪ್ರತೀ ಹೆಕ್ಟೇರ್ ಕಾಳು ಮೆಣಸು ಬೆಳೆಗೆ ಹೆಕ್ಟೇರ್ ಕಾಳು ಮೆಣಸು ಬೆಳೆಗೆ ರೂ.47,000 (ಪ್ರತಿಎಕರೆಗೆ ರೂ.19028) ವಿಮಾ ಮೊತ್ತವಾಗಿದ್ದು ರೈತರ ಪಾಲಿನ ವಿಮಾ ಕಂತು ರೂ. 2350 (ಪ್ರತಿಎಕರೆಗೆರೂ. 952)ಆಗಿರುತ್ತದೆ.ವಿಮಾ ನೋಂದಾವಣೆಗೆ ಜೂನ್ 30 ಕೊನೆಯ ದಿನವಾಗಿದೆ. ಬೆಳೆಸಾಲ ಪಡೆದ ರೈತರು ತಮ್ಮ ಬೆಳೆಸಾಲ ಪಡೆದಬ್ಯಾಂಕ್/ಸೊಸೈಟಿಯನ್ನು ಸಂಪರ್ಕಿಸಬಹುದಾಗಿದೆ.
ಬೆಳೆಸಾಲ ಹೊಂದಿರದ ರೈತರು ತಮ್ಮಉಳಿತಾಯಖಾತೆ ಇರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9481440812 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.