ಕಾರ್ಕಳ: ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕುಗಳು ತಲುಪದ ಕಡೆಗಳಲ್ಲಿ ಜನರ ಮನೆಮಾತಾಗಿರುವ ಕರ್ಣಾಟಕ ಬ್ಯಾಂಕ್ ಕಡ್ತಲ ಗ್ರಾಮದಲ್ಲಿ ತನ್ನ ಗ್ರಾಮೀಣ ಶಾಖೆಯನ್ನು ತೆರೆದಿದೆ.
ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಕರ್ಣಾಟಕ ಬ್ಯಾಂಕಿನ 956ನೇ ಶಾಖೆಯಾದ ವಿತ್ತೀಯ ಸೇರ್ಪಡೆ, ಮಿನಿ ಇ ಲಾಬಿ ಶಾಖೆಯನ್ನು ಕಾಪು ಕೆ.ಪಿ ಕುಮಾರಗುರು ತಂತ್ರಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಕರ್ಣಾಟಕ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮುಖ್ಯ ಪ್ರಬಂಧಕ ವಾದಿರಾಜ ಕೆ ವಹಿಸಿ ಮಾತನಾಡಿ, ಶತಮಾನೋತ್ಸವದ ಸಂಭ್ರಮದಲ್ಲಿರುವ ಕರ್ನಾಟಕ ಬ್ಯಾಂಕ್ 1.77 ಸಾವಿರ ಕೋಟಿ ವಹಿವಾಟನ್ನು ನಡೆಸಿದೆ. ಕಡ್ತಲ ಗ್ರಾಮೀಣ ಬ್ಯಾಂಕ್ ಶಾಖೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಳ್ಳಾರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಯೋಗೀಶ್ ಮಲ್ಯ, ಸಿರಿಬೈಲು ಬರ್ಬರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಶಾಂತ ಬೆಳಿರಾಯ, ನಿವೃತ್ತ ಉಪನ್ಯಾಸಕ ಕಡ್ತಲ ಕರುಣಾಕರ ಹೆಗ್ಡೆ, ಕಡ್ತಲ ಶಾಖೆಯ ಶಾಖಾ ಪ್ರಬಂಧ ವಿಜೇತ್ ರೈ.ಪಿ,ಕಟ್ಟಡದ ಮಾಲೀಕ ಹಾಗೂ ಕಡ್ತಲ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ ಉಪಸ್ಥಿತರಿದ್ದರು.
ವಾದಿರಾಜ ಸ್ವಾಗತಿಸಿ, ರಾಘವೇಂದ್ರ ಶೆಟ್ಟಿ ನಿರೂಪಿಸಿದರು
K