Share this news

ಮಂಡ್ಯ: ವಾಹನ ತಪಾಸಣೆ ವೇಳೆ ಪೊಲೀಸರು ಮಾಡಿದ ಎಡವಟ್ಟಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿ ಗೊರವನಹಳ್ಳಿಯ ಮೂರು ವರ್ಷದ ಬಾಲಕಿ ಬೈಕಿನಿಂದ ಬಿದ್ದು ಮೃತಪಟ್ಟ ಘಟನೆಯ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.

ವಾಹನ ತಪಾಸಣೆಗೆ ಕೆಲವೊಂದು ನಿಯಮಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂ ಈ ಕುರಿತು ಸುತ್ತೋಲೆ ಹೊರಡಿಸುವ ಮೂಲಕ ಪೊಲೀಸ್​ ಸಿಬ್ಬಂದಿಗೆ ಖಡಕ್​ ಸೂಚನೆ ನೀಡಿದ್ದಾರೆ.
ಟ್ರಾಫಿಕ್ ಪೊಲೀಸರು ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದರಿಂದ ಮಂಡ್ಯದಲ್ಲಿ ದುರ್ಘಟನೆ ಸಂಭವಿಸಿದೆ. ಈ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲ ನಿರ್ದೇಶನಗಳನ್ನು ಪಾಲಿಸುವಂತೆ ಸುರಕ್ಷತಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.
ಸಕಾರಣವಿಲ್ಲದೇ ವಾಹನಗಳನ್ನು ತಡೆಯುವಂತಿಲ್ಲ, ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರ ವಾಹನ ನಿಲ್ಲಿಸಬೇಕು. ಇದಲ್ಲದೇ ದಿಢೀರ್ ರಸ್ತೆಗೆ ಬಂದು ವಾಹನ ಅಡ್ಡಗಟ್ಟುವಂತಿಲ್ಲ, ಇದಲ್ಲದೇ ಸಹ ಸವಾರರನ್ನು ಎಳೆದಾಡುವಂತಿಲ್ಲ ,ರಸ್ತೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ತಡೆಯುವಂತಿಲ್ಲ ಎಂದು ಡಿಜಿ ಸುತ್ತೋಲೆ ಹೊರಡಿಸಿದ್ದಾರೆ

 

 

 

 

 

Leave a Reply

Your email address will not be published. Required fields are marked *