ಕಾರ್ಕಳ: ತಾಲೂಕಿನ ಸಾಣೂರು ದೇಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಏಪ್ರಿಲ್ 23ರಿಂದ ಮೇ 4 ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಹಾಗೂ ವಾಹನದ ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ (ಏ.7) ಸೋಮವಾರ ನಡೆಯಿತು.
ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಮುದೆಲಾಡಿ ಮನೆ ಸಾಣೂರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ , ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀರಾಮ ಭಟ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಭಾತ್ ನಾಯ್ಕ್ ಸಾಣೂರು ಗುತ್ತು, ಮುಂಬೈ ಸಮಿತಿಯ ಪ್ರಧಾನ ಸಂಚಾಲಕರಾದ ವಿದ್ಯಾಧರ್ ಕರ್ಕೇರ ಕಡೆಬೆಟ್ಟು ಗುತ್ತು, ವಿಜಯ ಶೆಟ್ಟಿ ಪೊರ್ಲೊಟ್ಟು ಗುತ್ತು, ಸಂಘಟನಾ ಕಾರ್ಯದರ್ಶಿಯಾದ ಜಗದೀಶ್ ಪೂಜಾರಿ ಸಾಣೂರು, ನರಸಿಂಹ ಭಟ್, ಸ್ವಾಗತ ಸಮಿತಿ ಸಂಚಾಲಕರಾದ ಯುವರಾಜ್ ಬಲಿಪ, ಜೀರ್ಣೋದ್ದಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ಯುವರಾಜ್ ಜೈನ್, ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕರಾದ ಮೋಹನ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಭಾಮಿನಿ ಏರ್ನಡ್ಕ ಗುತ್ತು, ದೇವಾನಂದ್ ಶೆಟ್ಟಿ ಪ್ರವೀಣ್ ಕೋಟ್ಯಾನ್, ಶಂಕರ್ ಶೆಟ್ಟಿ, ಕೊರಗ ಶೆಟ್ಟಿ, ಪದ್ಮನಾಭ ಶೆಟ್ಟಿ, ಪ್ರವೀಣ್ ಶೆಟ್ಟಿ, ಸತೀಶ್ ಮಠದಕೆರೆ ಸದಾಶಿವ ಶೆಟ್ಟಿ, ಸುನೀಲ್ ಶೆಟ್ಟಿ ಮಹೇಶ್ ಶೆಟ್ಟಿ ಸಾಧು ನಾಯ್ಕ್ ಕರುಣಾಕರ್ ಶೆಟ್ಟಿ ಮಾಧವ ಭಂಡಾರ್ಕರ್ ಶೇಖರ್ ಶೆಟ್ಟಿ ಮಂಜೇಶ್ ಶೆಟ್ಟಿ ಅಖಿಲೇಶ್ ಭಾಸ್ಕರ್ ಭಟ್ ಉಪಸ್ಥಿತರಿದ್ದರು.