ಮಂಗಳೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯದ ನೂತನ ಅಧ್ಯಕ್ಷರಾಗಿ ಶೇಖರ್ ಕಡ್ತಲ ಆಯ್ಕೆಯಾಗಿದ್ದಾರೆ.
ಸಂಘದ ಮಹಾಸಭೆಯು ಸಂಘದ ಅಧ್ಯಕ್ಷೆ ಲಿಲ್ಲಿ ಪಾಯ್ಸ್ ರವರ ಅಧ್ಯಕ್ಷತೆಯಲ್ಲಿ ಸೈಂಟ್ ಆಗ್ನಸ್ ಹೈಸ್ಕೂಲ್ ಮಂಗಳೂರಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣಾ ಪ್ರಕ್ರಿಯೆಯನ್ನು ಮೈಸೂರು ವಿಭಾಗ ಕಾರ್ಯಾಧ್ಯಕ್ಷರಾದ ತ್ಯಾಗಮ್ ಹರೇಕಳ ನಡೆಸಿಕೊಟ್ಟರು.ನೂತನ ಅಧ್ಯಕ್ಷರಾಗಿ ಎಸ್.ಡಿ.ಎಂ ಮಂಗಳ ಜ್ಯೋತಿ ಸಮಗ್ರ ಪ್ರೌಢಶಾಲೆ ವಾಮಂಜೂರಿನ ದೈಹಿಕ ಶಿಕ್ಷಣ ಶಿಕ್ಷಕ ಶೇಖರ್ ಕಡ್ತಲ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಲಿಲ್ಲಿ ಪಾಯ್ಸ್ ಅತ್ತಾವರ,
ಪ್ರಧಾನ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಉಚ್ಚಿಲಗುಡ್ಡೆ, ಕೋಶಾಧಿಕಾರಿ ಜಯಶ್ರೀ ಕಿನ್ನಿಕಂಬಳ, ಉಪಾಧ್ಯಕ್ಷರು ದಿಲೀಪ್ ಕುಮಾರ್ ಕೊಣಾಜೆ, ಮಮತಾ ಮಲ್ಲಿಕಟ್ಟೆ, ವಿಲಾಸಿನಿ, ಜೊತೆ ಕಾರ್ಯದರ್ಶಿ ಗೋಪಾಲ್ ಕಿನ್ನಿಕಂಬಳ, ಜಯಲಕ್ಷ್ಮಿ ಗುರುಪುರ, ಸಂಘಟನಾ ಕಾರ್ಯದರ್ಶಿ ಪ್ರಮೋದ್ ಮಳಲಿ, ರಾಜೀವ ನಾಯಕ್ ಕೊಣಾಜೆ ಪದವು, ಡಯಾನ ಮೂಡುಶೆಡ್ಡೆ, ಕ್ರೀಡಾ ಕಾರ್ಯದರ್ಶಿ ಗಣೇಶ್ ಲಮಣಿ ಕೋಟೆಕಾರ್, ಸಾಂಸ್ಕೃತಿಕ ಕಾರ್ಯದರ್ಶಿ,ಪ್ರೀತಮ್ ಉಳ್ಳಾಲ, ಪತ್ರಿಕಾ ವರದಿಗಾರ ದರ್ಶನ್ ನಾಯಕ್ ಮುತ್ತೂರು,ಲೆಕ್ಕ ಪರಿಶೋಧಕರು ಲ್ಯಾನ್ಸಿ ಸಿಕ್ವೇರಾ ಕಿನ್ನಿಕಂಬಳ ಹಾಗೂ 9 ಮಂದಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.
`