ಹೆಬ್ರಿ: ಅಮೃತ ಭಾರತಿ ಮಾತೃಮಂಡಳಿ ವತಿಯಿಂದ ಫಲಾನುಭವಿಗಳಾದ ಮುದ್ರಾಡಿಯ ರಾಜಪ್ಪ ಶೆಟ್ಟಿಗಾರ್ ದಂಪತಿಗಳಿಗೆ ಗಾಲಿ ಕುರ್ಚಿಯನ್ನು ಬುಧವಾರ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಅಮೃತಭಾರತಿ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಹೆಚ್. ಗುರುದಾಸ ಶೆಣೈ, ಟ್ರಸ್ಟಿನ ಸದಸ್ಯ ರಾಮಕೃಷ್ಣ ಆಚಾರ್ಯ, ಮಾತೃ ಮಂಡಳಿ ಅಧ್ಯಕ್ಷೆ ವೀಣಾ ಆರ್ ಭಟ್,ಶಾಲಾ ಶಿಕ್ಷಕಿ ವಿಮಲ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯ ಸನತ್ ಕುಮಾರ್, ಮೇಲ್ವಿಚಾರಕ ಸದಾಶಿವ, ಮಾತೃಮಂಡಳಿ ಮಾತೆಯರಾದ ಗಾಯತ್ರಿ ಭಟ್, ಗಗನರಾಜ್ ಜೋಗಿ, ಶೋಭಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.