ಕಾರ್ಕಳ : ವಿಶೇಷ ಚೇತನರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿ ಅತೀ ಸುಂದರವಾಗಿ ನಿರ್ಮಿಸಿದ ಈ ಒಳಾಂಗಣ ಸೆನ್ಸರಿ ಪಾತ್ ಹಾಗೂ ಶಟಲ್ಕೋರ್ಟ್ ಘಟಕವನ್ನು ಮಕ್ಕಳು ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರವಾಗಲಿ ಎಂದು ಈ ಘಟಕವನ್ನು ಕೊಡುಗೆ ನೀಡಿದ ಪ್ಲಾಂಟ್- ಟೆಕ್ ಇಂಡಸ್ಟ್ರಿಯಲ್ ಸರ್ವಿಸಸ್ ಲಿಮಿಟೆಡ್ ಇದರ ಸಿ.ಇ.ಓ ಶ್ರೀ ಅಭಯ್ ತರ್ಟೆ ಅವರು ಹೇಳಿದರು.
ಅವರು ಕಾರ್ಕಳದ ಚೇತನಾ ವಿಶೇಷ ಶಾಲೆಯಲ್ಲಿ ಒಳಾಂಗಣ ಸೆನ್ಸರಿ ಪಾತ್ ಹಾಗೂ ಶಟಲ್ಕೋರ್ಟ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತಿ ಸೇವಾ ಮಂಡಳಿ ಟ್ರಸ್ಟಿನ ಗೌರವಾಧ್ಯಕ್ಷರಾದ ಬಿ.ಗಣಪತಿ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿ ಮಾತನಾಡಿ, ವಿಶೇಷ ಮಕ್ಕಳಿಗಾಗಿ ಇರುವ ಚೇತನಾ ವಿಶೇಷ ಶಾಲೆಯನ್ನು ತಾನು ಅತೀ ಹತ್ತಿರದಿಂದ ಬಲ್ಲವನಾಗಿದ್ದು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದ ಪರಿಶ್ರಮದಿಂದ ಹೊಸ ಹೊಸ ಯೋಜನೆಗಳೊಂದಿಗೆ ಶ್ರಮಿಸುತ್ತಿರುವ ಸಂಸ್ಥೆಗೆ ತಮ್ಮಿಂದಾದ ಸಹಕಾರ ನೀಡುವ ಭರವಸೆಯನ್ನು ನೀಡಿ ಸಂಸ್ಥೆಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಪ್ಲಾಂಟ್- ಟೆಕ್ ಇಂಡಸ್ಟ್ರಿಯಲ್ ಸರ್ವಿಸಸ್ಸ್ ಲಿ ಮ್ಯಾನೇಜರ್ ರಾಜೇಶ್ವರಿ ವಿ ರಾವ್, ಯು ಉಮಾಕಾಂತ್ ನಾಯಕ್ ಮಂಗಳೂರು, ರಮ್ಯಾ ಸುಧೀಂದ್ರ, ಕಾರ್ಕಳ, ರಾಷ್ಟಿçÃಯ ಸ್ವಯಂ ಸೇವಾ ಸಂಘದ ತಾಲೂಕು ಸಂಘ ಚಾಲಕರಾದ ಕೆ. ಉದಯ್ ಕುಮಾರ್ ಶೆಣೈ, ಭಾರತೀ ಸೇವಾ ಮಂಡಳಿ ಟ್ರಸ್ಟ್ನ ಅಧ್ಯಕ್ಷರಾದ ಎಂ.ಗಣಪತಿ ಪೈ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಕೆ. ವಿಜಯ್ಕುಮಾರ್ ಸ್ವಾಗತಿಸಿ, ಸಂಚಾಲಕರಾದ ರಘುನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕಿ ಹೇಮಲತಾ ವಂದಿಸಿ, ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.