ಕಾರ್ಕಳ: ತಾಲೂಕಿನ ಬೋಳ ಗ್ರಾಮದ ಪದವು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೂಲತಃ ತೀರ್ಥಹಳ್ಳಿಯ ಪ್ರವೀಣ್ ಡಯಾಸ್(37ವ) ಮೃತಪಟ್ಟವರು. ಅವಿವಾಹಿತರಾಗಿದ್ದ ಪ್ರವೀಣ್ ಗೆ ವಿಪರೀತ ಕುಡಿತದ ಚಟ ಇದ್ದು,ಕಳೆದ 3 ವರ್ಷಗಳಿಂದ ಮನೆಗೆ ಹೋಗುತ್ತಿರಲಿಲ್ಲ. ಆ.11 ರಂದು ಬೋಳ ಗ್ರಾಮದ ಪದವು ಎಂಬಲ್ಲಿ ಬೆಳಗ್ಗೆ ದಾರಿಯಲ್ಲಿ ಬಿದ್ದುಕೊಂಡಿದ್ದ ಅವರು ಮಾತನಾಡುತ್ತಿಲ್ಲ ಎಂದು ನವೀನ್ ಎಂಬವರು ಮಾಹಿತಿ ನೀಡಿದ ಹಿನ್ನಲೆ ಪ್ರವೀಣ್ ಸಹೋದರ ನವೀನ್ ಡಯಾಸ್ ಅವರು ಕಾರ್ಕಳಕ್ಕೆ ಬಂದಿದ್ದರು. ಆದರೆ ಪ್ರವೀಣ್ ರವರು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿದ್ದರು.
ಮೃತ ಪ್ರವೀಣ್ ಡಯಾಸ್ ಸಂಜೆ ವೇಳೆ ಕಾರ್ಕಳ ಪೇಟೆಯಲ್ಲಿ ತಿರುಗಾಡಿಕೊಂಡು ಯಾರಾದರೂ ಕರೆದರೆ ಕೆಲಸ ಮಾಡಿ ರಾತ್ರಿ ಸಮಯ ರಸ್ತೆ ಬದಿ ಬಸ್ಸು ನಿಲ್ದಾಣಗಳಲ್ಲಿ ಉಳಿಯುತ್ತಿದ್ದು ಆತನು ವಿಪರೀತ ಮದ್ಯವ್ಯಸನಿ ಆಗಿದ್ದು ಮದ್ಯಪಾನ ಮಾಡಿ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
