Share this news

ಬೆಂಗಳೂರು: ಮುಡಾ ನಿವೇಶನ ಹಗರಣ ಸಂಬAಧ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ನಡೆದ ಇಡಿ ದಾಳಿ ಇದೀಗ ಅಂತ್ಯವಾಗಿದ್ದು, ನಟೇಶ್ ರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ ನಟೇಶ್ ಮನೆಗೆ ನಿನ್ನೆ ಬೆಳಗ್ಗೆ 8 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ರಾತ್ರಿ10 ಗಂಟೆಯವರೆಗೂ ದಾಖಲೆಗಳನ್ನು ಜಾಲಾಡಿದ್ದು, 4 ಬ್ಯಾಗ್ ಕೊಂಡೊಯ್ದಿದ್ದರು. ಇಂದು ಕೂಡ ಪರಿಶೀಲನೆ ನಡೆಸಿದ್ದು, ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮುಗಿಸಿ ತೆರಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಆಪ್ತ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಅವರ ಮನೆಯಲ್ಲೂ ಇಡಿ ವಿಚಾರಣೆ ಅಂತ್ಯವಾಗಿದೆ.

ಮಂಡ್ಯ  ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿಯ ಕುರುಬರ ಬೀದಿಯಲ್ಲಿರುವ ಜಯರಾಮ್ ಸಂಬAಧಿಕರು ಮತ್ತು ಪಾಲುದಾರರ ಮನೆ ಮೇಲೆ ದಾಳಿ ಮಾಡಲಾಗಿತ್ತು. ದಾಳಿ ವೇಳೆ ಹಲವು ಮಹತ್ವದ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಬAಧಿಕರ ಮನೆಯಲ್ಲಿ ಸಿಕ್ಕ ದಾಖಲೆ ಆಧಾರದಲ್ಲಿ ಜಯರಾಮ್ ಗೆ ಗ್ರಿಲ್ ಮಾಡಲಿದ್ದಾರೆ.

ದಿನೇಶ್ ಕುಮಾರ್ ಆಯುಕ್ತರಾಗಿ ಮೈಸೂರಿಗೆ ಬಂದ ಬಳಿಕವೇ ವಕ್ರತುಂಡ ಸೊಸೈಟಿ ಪ್ರಾರಂಭವಾಗಿತ್ತು. ಸಂಘಕ್ಕೆ ನಿರ್ದೇಶಕರಾದ ಇಬ್ಬರು ದಿನೇಶ್ ಕುಟುಂಬಸ್ಥರು ಎನ್ನುವ ಅನುಮಾನವಿದೆ. ಎಂಎAಜಿ ಕಚೇರಿ ಕೆಳಗೆ ಈ ವಕ್ರತುಂಡ ಸೊಸೈಟಿ ಇದೆ. ಹೀಗಾಗಿ ಇಡಿ ಅಧಿಕಾರಿಗಳು ವಕ್ರತುಂಡ ಸೊಸೈಟಿಯಲ್ಲಿ ದಾಖಲೆ ಪರಿಶೀಲಸಿದ್ದಾರೆ.

 

 

 

 

Leave a Reply

Your email address will not be published. Required fields are marked *