ಹೆಬ್ರಿ: ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದಲ್ಲಿ ಪುಟಾಣಿಗಳ ಪ್ರಾರಂಭೋತ್ಸವವನ್ನು ಟ್ರಸ್ಟ್ ನ ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಶಿಶು ಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷ ಸುಧೀರ್ ನಾಯಕ್ ಮಾತನಾಡಿ ಶಿಶು ಮಂದಿರದಲ್ಲಿ ಚಟುವಟಿಕೆ ಆಧಾರಿತ ಸಂಸ್ಕಾರ ಶಿಕ್ಷಣವನ್ನು ನೀಡುವ ಮೂಲಕ ಸಮಾಜದ ಆದರ್ಶ ವ್ಯಕ್ತಿಯನ್ನು ಮಾಡುವ ಪ್ರಯತ್ನ ಮಾಡಲಾಗುತ್ತದೆ. ಮನೋರಂಜನೆಯನ್ನು ನೀಡಿ ಲವಲವಿಕೆಯಿಂದ ಶಿಶುವನ್ನು ಬೆಳೆಯುವಂತೆ ನಮ್ಮ ಸಂಸ್ಥೆ ಕಾರ್ಯಗತವಾಗಿದೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ, ವಿಶ್ವಸ್ಥರಾದ ಶೈಲೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ್ ಶೆಟ್ಟಿ, ಸಂಸ್ಥೆಯ ಮೇಲ್ವಿಚಾರಕ ರಾಘವೇಂದ್ರ, ಸಂಸ್ಥೆಯ ಮುಖ್ಯಸ್ಥರಾದ ಅರುಣ್ ಕುಮಾರ್, ಅನಿತಾ, ಅಪರ್ಣಾ ಆಚಾರ್, ಶಕುಂತಲಾ ಉಪಸ್ಥಿತರಿದ್ದು , ಜಿಲ್ಲಾ ಶಿಶು ಶಿಕ್ಷಣ ಪ್ರಮುಖ್ ಪ್ರತಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಶು ಮಂದಿರದ ಶಿಕ್ಷಕಿ ಮಲ್ಲಿಕಾ ನಿರೂಪಿಸಿ, ಅನಿತಾ ಸ್ವಾಗತಿಸಿ, ಶಿಶು ಮಂದಿರದ ಮೇಲ್ವಿಚಾರಕಿ ಮೀನಾಕ್ಷಿ ವಂದಿಸಿದರು. ಪೋಷಕರು ವಿದ್ಯಾರ್ಥಿಗಳು, ಸಹಾಯಕಿ ವನಜಾ ಉಪಸ್ಥಿತರಿದ್ದರು.