ಕಾರ್ಕಳ: ರಾಜ್ಯದಲ್ಲಿ ಆರಿದ್ರಾ ಮಳೆಯ ಆರ್ಭಟ ಜೊರಾಗಿದ್ದು, ಸುರಿಯುತ್ತಿರುವ ಭಾರೀ ಮಳೆಗೆ ಕಾರ್ಕಳ ತಾಲೂಕಿನ ವಿವಿಧ ಕಡೆ ಮನೆಗಳಿಗೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಕಾರ್ಕಳ ತಾಲೂಕು ಕಲ್ಯಾ ಗ್ರಾಮದ ಸಂತೋಷ ನಗರ ಎಂಬಲ್ಲಿ ನಾರಾಯಣ ಪೂಜಾರಿ ರವರ ಮನೆಗೆ ಬುಧವಾರ ರಾತ್ರಿ ಗಂಟೆ 8.30 ಕ್ಕೆ ಸುರಿದ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಅಂದಾಜು 10,000 ನಷ್ಟವಾಗಿದೆ.
ಸಾಬೀರಾ ಭಾನು ಕೋಂ ಸೈಯದ್ ಅನ್ವರ್ ಎಂಬವರ ಮನೆಯ ಮೇಲೆ ಮರ ಬಿದ್ದು ಅಂದಾಜು 8000 ನಷ್ಟವಾಗಿದೆ.