
ಕಾರ್ಕಳ, ಏ.01 : ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಮೃತ ದಾನಿ ಯಕೃತ್ತು (ಲಿವರ್) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.ಈ ಮೂಲಕ ಯಕೃತ್ತು ಕಸಿ ಶಸ್ತ್ರ ಚಿಕಿತ್ಸೆಯಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.
ಮೃತ ವ್ಯಕ್ತಿಯ ಕುಟುಂಬ ಅಂಗಾಗಗಳನ್ನು ದಾನ ಮಾಡಲು ನಿರ್ಧರಿಸಿದ್ದರಿಂದ ಒಬ್ಬ ಅನಾರೋಗ್ಯ ವ್ಯಕ್ತಿಗೆ ಜೀವದಾನ ನೀಡಿದಂತಾಗಿದೆ.ದೀರ್ಘಕಾಲದ ಯಕೃತ್ (ಲಿವರ್) ಕಾಯಿಲೆ ಮತ್ತು ಪೋರ್ಟಲ್ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯನ್ನು ಮೃತ ದಾನಿಯ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಶಿರನ್ ಶೆಟ್ಟಿ ಮತ್ತು ಅವರ ತಂಡದ ಆರಂಭಿಕ ಪರೀಕ್ಷೆಯಿಂದ, ಅವರ ಯಕೃತ್ತಿನ ಕಾಯಿಲೆಯು ಒಂದು ಹಂತಕ್ಕೆ ಮುಂದುವರೆದಿದ್ದು, ಯಕೃತ್ ಕಸಿ ಮಾಡುವಿಕೆಯಿಂದ ಮಾತ್ರ ರೋಗಿ ಬದುಕುಳಿಯುವ ಮತ್ತು ದೀರ್ಘಕಾಲೀನ ಚೇತರಿಕೆಗೆ ಉತ್ತಮ ಅವಕಾಶ ಎಂಬುದು ಸ್ಪಷ್ಟವಾಯಿತು. ತುರ್ತು ಕಸಿ ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ಗುರುತಿಸಿದ ಡಾ. ಶೆಟ್ಟಿ, ರೋಗಿಯನ್ನು HPB & ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್ಪ್ಲಾಂಟ್ ಸರ್ಜರಿಯ ಪ್ರಮುಖ ಸಲಹೆಗಾರ ಡಾ. ಜಯಂತ್ ರೆಡ್ಡಿ ನೇತೃತ್ವದ ಕಸಿ ತಂಡಕ್ಕೆ ಶಿಫಾರಸ್ಸು ಮಾಡಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಐಸಿಯು ತಂಡದೊಂದಿಗೆ ಡಾ. ಭರತ್ ಕುಮಾರ್ ಭಟ್ ಮತ್ತು ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಯು ಮೃತ ದಾನಿಯಿಂದ ಯಶಸ್ವಿಯಾಗಿ ಯಕೃತ್ತಿನ ಕಸಿಗೆ ಒಳಗಾದರು. ಇದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾತ್ರವಲ್ಲದೆ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಕಸಿ ನಡೆಸಲ್ಪಟ್ಟ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ HPB & ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿ ಶಸ್ತ್ರಚಿಕಿತ್ಸೆ ಸಲಹೆಗಾರರಾದ ಡಾ.ದೀಪ್ತಿ ರಾಮಚಂದ್ರ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ಬೋಧನಾ ಆಸ್ಪತ್ರೆಗಳು, MAHE, ಮಣಿಪಾಲದ ಸಿಒಒ ಡಾ. ಸುಧಾಕರ್ ಕಾಂತಿಪುಡಿ, ಯಕೃತ್ (ಲಿವರ್) ಕಸಿ ರೋಗಿ
ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಶಿರನ್ ಶೆಟ್ಟಿ, HPB & ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿ ಶಸ್ತ್ರಚಿಕಿತ್ಸೆಯ ಪ್ರಮುಖ ಸಲಹೆಗಾರರಾದ ಡಾ. ಜಯಂತ್ ರೆಡ್ಡಿ , ಗ್ಯಾಸ್ಟ್ರೋಎಂಟರಾಲಜಿ ಸರ್ಜರಿ ವಿಭಾಗ ಸಹಪ್ರಾಧ್ಯಾಪಕರಾದ ಡಾ.ಭರತ್ ಭಟ್ ಉಪಸ್ಥಿತರಿದ್ದರು.















.
.
.
.
.
.
.
.
.
.
