ಕಾರ್ಕಳ:ಹೈಟೆನ್ಶನ್ ವಿದ್ಯುತ್ ಪ್ರವಹಿಸಿ ಯುವಕ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಮಿತ್ತಬೆಟ್ಟು ಉರ್ಕಾಲ್ ಎಂಬಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಮರ್ಣೆ ಗ್ರಾಮದ ಬಸದಿ ಬಳಿಯ ನಿವಾಸಿ ಸುಧಾಕರ
(3 5)ಮೃತಪಟ್ಟ ದುರ್ದೈವಿ.
ಹೈಟೆನ್ಶನ್ ವಿದ್ಯುತ್ ಸ್ಥಗಿತಗೊಳಿಸುವ ಜಿಒಎಸ್ ಆಫ್ ಮಾಡಲು ಹೋದ ಸಂದರ್ಭದಲ್ಲಿ ಜಂಪ್ ವಯರ್ ತುಂಡಾಗಿ ಜಿಒಎಸ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು.ಇದನ್ನು ಗಮನಿಸದ ಆತ ಜಿಒಎಸ್ ಸ್ವಿಚ್ ಮುಟ್ಟುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುಧಾಕರ ವಿದ್ಯುತ್ ಲೈನ್ ಅಳವಡಿಸುವ ಕೆಲಸದಲ್ಲಿ ಕೆಲವು ವರ್ಷಗಳಿಂದ ಕೆಲಸ ಮಾಡುತಿದ್ದರು.ಮಿತ್ತಬೆಟ್ಟು ಪರಿಸರದಲ್ಲಿ ಕರೆಂಟ್ ಇಲ್ಲದ ಕಾರಣದಿಂದ ಸ್ಥಳೀಯ ಎಲೆಕ್ಟ್ರಿಶಿಯನ್ ಒಬ್ಬರು ಲೈನ್ ಫಾಲ್ಟ್ ಹುಡುಕಲು ಸುಧಾಕರ ಅವರನ್ನು ಕರೆದುಕೊಂಡು ಹೋಗಿದ್ದರು.ಈ ವೇಳೆ ಜಂಪ್ ತುಂಡಾಗಿದ್ದನ್ನು ಗಮನಿಸಿದ ಸುಧಾಕರ ಲೈನ್ ಆಫ್ ಮಾಡಲು ಮುಂದಾದಾಗ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ