Share this news

ಕಾರ್ಕಳ : ಶುಕ್ರವಾರ (ಡಿ.7) ಸಂಜೆ ಸುರಿದ ಗುಡುಗು ಸಹಿತ ಭಾರಿ ಮಳೆಯ ಸಂದರ್ಭ  ಸಿಡಿಲು ಬಡಿದು ಕಾರ್ಕಳದ ಯುವತಿ ಗಾಯಗೊಂಡಿದ್ದಾಳೆ.

ಪತ್ತೊಂಜಿಕಟ್ಟೆ ಮೂರು ಸೆಂಟ್ಸ್ ಕಾಲೊನಿ ನಿವಾಸಿ ಸುರೇಶ್ ಪೂಜಾರಿ ಅವರ ಮಗಳು ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಚೈತನ್ಯ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಕಾರ್ಕಳ ತಹಶಿಲ್ದಾರ್ ಪ್ರದೀಪ್, ಆರ್, ಸೇರಿದಂತೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು.

 

Leave a Reply

Your email address will not be published. Required fields are marked *