
ಕಾರ್ಕಳ, ಜು. 16: ಕಾರ್ಕಳ ತಾಲೂಕಿನ ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಜಾಗದ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.
ಮಿಯ್ಯಾರಿನ ಅನಿಲ್ ಮಸ್ಕರೇನ್ಹಸ್ (53) ಎಂಬವರು ಮಾಳ ಗ್ರಾಮದ ಹುಕ್ರಟ್ಟೆ ಎಂಬಲ್ಲಿ ಜಾಗ ಮತ್ತು ಮನೆ ಹೊಂದಿದ್ದು,ಆಗಾಗ ಅಲ್ಲಿಗೆ ಹೋಗಿ ಬರುತ್ತಿದ್ದು ಆ ವೇಳೆ ಅಲ್ಲಿ ನೆರೆಮನೆಯ ನಿವಾಸಿ ಗಣೇಶ ಎಂಬಾತ ಇದು ತನ್ನ ಜಾಗ ಎಂದು ಜಗಳ ಮಾಡುತ್ತಿದ್ದನು. ಜು.15 ರಂದು ಅನಿಲ್ ಮಸ್ಕರೇನ್ಹಸ್ ಅವರು ಬೆಳಿಗ್ಗೆ ಅಲ್ಲಿಗೆ ಹೋಗಿ ಕೆಲಸ ಮಾಡಿ ಸಂಜೆ 5.30ರ ವೇಳೆಗೆ ಮನೆಯ ಕಂಪೌಂಡ್ ಹತ್ತಿರ ಒಳಗೆ ಹುಲ್ಲು ಮತ್ತು ಕಳೆಗಿಡಗಳನ್ನು ತೆಗೆಯುತ್ತಿದ್ದಾಗ, ಅಲ್ಲಿಗೆ ಬಂದ ಗಣೇಶ್ ಈ ಜಾಗ ನನಗೆ ಸೇರಿದ್ದು ಇಲ್ಲಿ ಯಾಕೆ ಕೆಲಸ ಮಾಡುತ್ತೀಯಾ ಎಂದು ಆಕ್ಷೇಪಿಸಿದ್ದಾನೆ. ನಾನು ನನ್ನ ಜಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅನಿಲ್ ಮನೆಯೊಳಗೆ ಹೋದಾಗ ಗಣೇಶ್ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ 2 ಕತ್ತಿಗಳನ್ನು ತೆಗೆದುಕೊಂಡು ಬಂದು ಹೊರಗೆ ಬಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಸಿಟ್ ಔಟ್ಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲಿಗೆ ತುಳಿದಿದ್ದಾನೆ. ಬಳಿಕ ಮನೆಯ ಹೊರಗೆ ಇಟ್ಟಿದ್ದ ಅವರ ಹೊಸ ಸ್ಕೂಟರನ್ನು ದೂಡಿ ಹಾಕಿದಾಗ ಸ್ಕೂಟರ್ ಹಾಳು ಮಾಡಬೇಡ ಎಂದು ಅನಿಲ್ ಹೊರಗೆ ಬಂದಾಗ ಗಣೇಶ್ ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಕಡಿಯಲು ಬಂದಿದ್ದಾನೆ. ಆಗ ತಡೆಯಲು ಕೈ ಅಡ್ಡ ಹಿಡಿದಿದ್ದು ಕತ್ತಿಯಿಂದ ಕಡಿದ ಪರಿಣಾಮ ಎಡಕೈಗೆ ತಾಗಿ ಹೆಬ್ಬೆರಳಿಗೆ ಗಾಯವಾಗಿದ್ದು, ಅನಿಲ್ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
