Share this news

ನವದೆಹಲಿ: 2001ರಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ವೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆ ಮೇಲೆ ನಿಷೇಧ ಹೇರಿದ್ದರೂ ಕರ್ನಾಟಕ ಸೇರಿದಂತೆ ಹಲವು ದೇಶಗಳಲ್ಲಿ ಈಗಲೂ ಸಂಘಟನೆ ಸಕ್ರಿಯವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.


ಸಂಘಟನೆ ಕಾರ್ಯಾಕರ್ತರು ಬೇರೆ ಬೇರೆ ಸಂಘಟನೆಯ ಹೆಸರಲ್ಲಿ ಮತ್ತೆ ಒಗ್ಗೂಡಿ, ವಿದೇಶಗಳಲ್ಲಿರುವ ತಮ್ಮ ಸಹಚರರು ಮತ್ತು ನಾಯಕರ ಜೊತೆ ನಿರಂತರ ಸಂಪರ್ಕದ ಮೂಲಕ ದೇಶದ್ರೋಹದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ಸಿಮಿ ಸಂಘಟನೆಯ ಗುರಿ ದೇಶದ ಕಾನೂನಿಗೆ ವಿರುದ್ಧವಾಗಿದೆ. ಸಂಘಟನೆ, ಇಸ್ಲಾಂ ಹೆಸರಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಗ್ಗೂಡಿಸಿ ಜಿಹಾದ್‌ಗೆ ಬೆಂಬಲ ಪಡೆಯುವ ಯತ್ನ ಮಾಡುತ್ತಿದೆ. ಕ್ರಾಂತಿಯ ಮೂಲಕ ಭಾರತದಲ್ಲಿ ಷರಿಯಾ ಅಧರಿತ ಇಸ್ಲಾಮಿಕ್ ಆಡಳಿತ ಸ್ಥಾಪನೆ ಅದರ ಗುರಿ. ದೇಶದ ಸಂವಿಧಾನ, ಅದರ ಜಾತ್ಯತೀತ ಸ್ವರೂಪದಲ್ಲಿ ಸಿಮಿತ ನಂಬಿಕೆ ಹೊಂದಿಲ್ಲ. ಜೊತೆಗೆ ಮೂರ್ತಿ ಪೂಜೆ ಪಾಪ ಎಂದು ಬೋಧಿಸಿ, ಇಂಥ ಆಚರಣೆಗಳನ್ನು ಕೊನೆಗಾಣಿಸಬೇಕು ಎಂದು ಕರೆಕೊಡುತ್ತದೆ.

ಸಂಘಟನೆ ನಿಷೇಧಿಸಿದ್ದರೂ, ಈಗಲೂ ಅದು ಕರ್ನಾಟಕ, ಆಂಧ್ರ, ಬಿಹಾರ, ಗುಜರಾತ್, ಕೇರಳ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳ ಮೂಲಕ ಸಂಘಟನೆ ಕಾರ್ಯಾಚರಣೆ ನಡೆಸುತ್ತಿದೆ. ಅದರ ಕಾರ್ಯಕರ್ತರು ಇತರೆ ಸಂಘಟನೆಗಳ ಹೆಸರಲ್ಲಿ ಮತ್ತೆ ಒಂದಾಗಿದ್ದಾರೆ. ಸಂಘಟನೆ ತನ್ನ ಕಾರ್ಯಕರ್ತರ ಮೂಲಕ ಪಾಕಿಸ್ತಾನ, ಅಷ್ಘಾನಿಸ್ತಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ, ನೇಪಾಳ ಮತ್ತು ಇತರೆ ಕೆಲ ದೇಶಗಳಲ್ಲಿನ ಕೆಲ ಮತೀಯ ಮತ್ತು ಉಗ್ರ ಸಂಘಟನೆಗಳ ಜೊತೆ ನಂಟುಹೊAದಿದೆ. ಹಿಜ್ಬುಲ್ ಮುಜಾಹಿದೀನ್, ಲಷ್ಕರ್‌ನಂಥ ಪಾಕ್ ಮೂಲಕ ಉಗ್ರ ಸಂಘಟನೆಗಳು ಸಿಮಿ ಸಂಘಟನೆಯಲ್ಲಿ ನುಸುಳುವ ಮೂಲಕ ಭಾರತದಲ್ಲಿ ದೇಶ ವಿರೋಧಿ ಕೆಲಸಗಳನ್ನು ನಡೆಸುವಲ್ಲಿ ಯಶಸ್ವಿಯಾಗಿವೆ.

ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಮುಸ್ಲಿಮರ ಬೆಂಬಲ ಪಡೆಯಲು ಸಂಘಟನೆ ದೇಶವ್ಯಾಪಿ ಆಂದೋಲನ ಆರಂಭಿಸಿದೆ. ಕುರಾನ್‌ನಲ್ಲಿರುವ ಅಂಶಗಳ ಅನ್ವಯ ಜನರು ಜೀವನ ನಡೆಸುವಂತೆ ಮಾಡುವುದು, ಇಸ್ಲಾಂ ಆಚರಣೆ ಉತ್ತೇಜಿಸುವುದು, ಧರ್ಮಕ್ಕಾಗಿ ಜಿಹಾದ್, ರಾಷ್ಟ್ರೀಯತೆಯ ವಿನಾಶ, ಇಸ್ಲಾಮಿಕ್ ಆಡಳಿತ ಸ್ಥಾಪನೆಯ ಗುರಿಯನ್ನು ಸಂಘಟನೆ ಹಾಕಿಕೊಂಡಿದೆ. ಹೀಗಿರುವಾಗ ಸಂಘಟನೆ ಮೇಲಿನ ನಿಷೇಧ ಹಿಂದಕ್ಕೆ ಪಡೆಯುವುದು ದೇಶದ ಭದ್ರತೆ ಮತ್ತು ಸಾರ್ವಭೌಮತಕ್ಕೆ ಅಪಾಯ ತರಲಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

 

Leave a Reply

Your email address will not be published. Required fields are marked *