Share this news

ಭುವನೇಶ್ವರ: ಜೂ.2ರಂದು ಸಂಭವಿಸಿದ 292 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ದುರಂತದ ವಿಚಾರಣೆ ನಡೆಸುತ್ತಿರುವ ಸಿಬಿಐ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಗ್ನಲ್‌ ಜೂನಿಯರ್‌ ಎಂಜಿನಿಯರ್‌ನನ್ನು ವಿಚಾರಣೆಗೆ ಒಳಪಡಿಸಿದೆ.

ಅಲ್ಲದೇ ಹೆಚ್ಚಿನ ತನಿಖೆಗಾಗಿ ಆತನ ಮನೆಯನ್ನು ಸೀಲ್‌ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆ ನಡೆಸುತ್ತಿರುವ ಸಿಬಿಐನ ಐವರು ಅಧಿಕಾರಿಗಳ ತಂಡ ಸೋಮವಾರ ಎಂಜಿನಿಯರ್‌ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದು, ಸೀಲ್‌ ಮಾಡಿದ್ದಾರೆ. ಅಲ್ಲದೆ ಎಂಜಿ​ನಿ​ಯ​ರ್‌​ನನ್ನು ಅಜ್ಞಾತ ಸ್ಥಳ​ದಲ್ಲಿ ವಿಚಾ​ರಣೆ ಮಾಡ​ಲಾ​ಗಿದೆ. ಹೆಚ್ಚಿನ ವಿಚಾ​ರ​ಣೆಗೆ ಆತ​ನನ್ನು ಮನೆಗೂ ಕರೆ​ತ​ರ​ಬ​ಹುದು ಎಂದು ವರ​ದಿ​ಗಳು ಹೇಳಿ​ವೆ.

 

ಈ ನಡುವೆ, ಎಂಜಿನಿಯರ್‌ ಘಟನೆ ನಡೆದಾಗಿನಿಂದ ತಲೆಮರೆಸಿಕೊಂಡಿದ್ದಾನೆ ಎಂಬ ವದಂತಿಗಳು ಹರ​ಡಿ​ದ್ದವು. ಆದರೆ ಅದನ್ನು ತಳ್ಳಿಹಾಕಿರುವ ರೈಲ್ವೆ ವಕ್ತಾ​ರರು, ‘ಯಾವ ಸಿಬ್ಬಂದಿಯೂ ನಾಪ​ತ್ತೆ​ಯಾ​ಗಿಲ್ಲ. ಎಲ್ಲರೂ ಸಿಬಿಐ ಹಾಗೂ ರೈಲ್ವೆ ಸುರ​ಕ್ಷತಾ ಆಯು​ಕ್ತರ ತನಿ​ಖೆಗೆ ಸಹ​ಕ​ರಿ​ಸು​ತ್ತಿ​ದ್ದಾ​ರೆ ಎಂದಿ​ದ್ದಾ​ರೆ.  ವಿಚಾ​ರ​ಣೆಗೆ ಒಳ​ಪಟ್ಟ ಎಂಜಿ​ನಿ​ಯರ್‌, ಸಿಗ್ನ​ಲಿಂಗ್‌ ಉಪ​ಕ​ರ​ಣ​ಗಳ ಅಳ​ವ​ಡಿಕೆ, ನಿರ್ವ​ಹಣೆ ಹಾಗೂ ದುರ​ಸ್ತಿಯ ಹೊಣೆ ಹೊತ್ತಿ​ದ್ದರು. ರೈಲು ದುರಂತ​ದಲ್ಲಿ 292 ಜನರು ಮೃತ​ಪಟ್ಟು, 11 00 ಜನರು ಗಾಯ​ಗೊಂಡಿ​ದ್ದ​ರು. ಘಟ​ನೆಗೆ ಸಿಗ್ನಲ್‌ ವ್ಯವ​ಸ್ಥೆ​ಯ​ಲ್ಲಿನ ವೈಫ​ಲ್ಯವೇ ಕಾರಣ ಎಂದು ಆರೋ​ಪಿ​ಸ​ಲಾ​ಗಿ​ತ್ತು.

 

Leave a Reply

Your email address will not be published. Required fields are marked *