ಕಾರ್ಕಳ: ಇತಿಹಾಸ ಪ್ರಸಿದ್ಧ ಕಣಂಜಾರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಏ.28 ರಿಂದ ಮೇ 8 ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ 9.30ಕ್ಕೆ ಕಣಂಜಾರು ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಯಾಯಿತು. ಊರಿನ ಹಿರಿಯರಾದ ಡಾ.ಎಂ.ಬಿ.ಆಚಾರ್, ನಿವೃತ್ತ ಶಿಕ್ಷಕ ಬಿ.ಕೃಷ್ಣ ಪ್ರಭು, ನವೀನಚಂದ್ರ ಹೆಗ್ಡೆ ಪಟೇಲರ ಮನೆ ಇವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ಷಡಂಗ ಬಿ.ಲಕ್ಷ್ಮೀನಾರಾಯಣ ತಂತ್ರಿ, ಅರ್ಚಕರಾದ ಗುರುರಾಜ ಮಂಜಿತ್ತಾಯ, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಧೀರ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿಕ್ರಮ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ,ಗ್ರಾ.ಪಂ. ಅಧ್ಯಕ್ಷರಾದ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ, ಸದಸ್ಯರುಗಳಾದ ಸತೀಶ್ ದೇವಾಡಿಗ, ಶಿವಪ್ರಸಾದ್ ರಾವ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ರಮೇಶ್ ಕಲ್ಲೊಟ್ಟೆ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಮಹೇಶ್ ಶೆಟ್ಟಿ ದೇವಶ್ಯ, ಚಂದನ್ ಹೆಗ್ಡೆ, ಹರಿದಾಸ ಹೆಗ್ಡೆ, ಸತೀಶ್ ಪೂಜಾರಿ ನ್ಯಾಯವಾದಿಗಳು,ಊರ ಹಿರಿಯರಾದ ಶೇಖರ್ ಶೆಟ್ಟಿ ದೊಡ್ಡಮನೆ, ಸುಂದರ್ ಶೆಟ್ಟಿ ಸಾಬ್ಲೋಟ್ಟು, ರಘು ಪುಜಾರಿ ಮಾಪುಂಜ, ಬಾಲಕೃಷ್ಣ ಹೆಗ್ಡೆ ತೆಂಕುಮನೆ, ವಿಠಲ್ ಶೆಟ್ಟಿ ಹೊನಿಯಾಲು, ಶೇಖರ್ ಶೆಟ್ಟಿ ಹೊಸಮನೆ ಸೇರಿದಂತೆ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಊರ ಗ್ರಾಮಸ್ಥರು ಉಪಸ್ಥಿತರಿದ್ದರು