ಇವರೆಲ್ಲರ ಅಹವಾಲುಗಳು ಹಾಗೂ ಸಮಸ್ಯೆಯನ್ನು ಶಾಂತಚಿತ್ತದಿಂದ ಆಲಿಸಿದ ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರ ಗ್ರಾಮ ವಾಸ್ತವ್ಯ ಯಾವುದೇ ಸದ್ದುಗದ್ದಲವಿಲ್ಲದೇ ನಡೆಯಿತು.
ನಕ್ಸಲ್ ಬಾಧಿತ ಈದು ಗ್ರಾಮದ ಆದಿವಾಸಿ ಮಲೆಕುಡಿಯ ಸಮುದಾಯದ ಜನರ ಸಮಸ್ಯೆ ಆಲಿಸಲು ಗುರುವಾರ ರಾತ್ರಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹಠಾತ್ ಗ್ರಾಮವಾಸ್ತವ್ಯ ನಡೆಸಿದರು. ಹೊಸ್ಮಾರಿನಿಂದ ಬರೊಬ್ಬರಿ 15 ಕಿ.ಮೀ ದೂರದ ಈದು ಗ್ರಾಮದ ಕಗ್ಗತ್ತಲ ಕಾಡಿನೊಳಗಿನ ಪ್ರದೇಶಕ್ಕೆ ಯಾವುದೇ ಸದ್ದುಗದ್ದಲವಿಲ್ಲದೇ ಪ್ರಚಾರವಿಲ್ಲದೇ ಜನರು ವಾಸವಿರುವ ಕಟ್ಟ ಕಡೆಯ ಸ್ಥಳಕ್ಕೆ ಕಾಡು ದಾರಿಯಲ್ಲಿ ಹತ್ತಿಳಿದು ತೆರಳಿ ಅಲ್ಲಿ ಉಳಿದುಕೊಂಡು ತಡರಾತ್ರಿಯವರೆಗೂ ನಿವಾಸಿಗಳ ಸಮಸ್ಯೆ ಆಲಿಸಿ ಉಳಿದ ಜನಪ್ರತಿನಿಧಿಗಳಿಗೆ ಮಾದರಿಯಾದರು.
ಶಾಸಕರು ನಮ್ಮ ಸಮಸ್ಯೆ ಆಲಿಸಲು ದುರ್ಗಮ ಕಾಡಿನಲ್ಲಿ ಖುದ್ದು ನಮ್ಮಲ್ಲಿಗೆ ಬರುತ್ತಾರೆ ಎನ್ನುವ ಸಣ್ಣ ಸುಳಿವು ಕೂಡ ಅಲ್ಲಿನ ನಿವಾಸಿಗಳಿಗೆ ಇರಲಿಲ್ಲ. ಯಾಕೆಂದರೆಶಾಸಕರು, ಸಚಿವರು ಗ್ರಾಮವಾಸ್ತವ್ಯ ನಡೆಸುತ್ತಾರೆ ಅಂದಾಗ ಒಂದಷ್ಟು ಪೂರ್ವ ಸಿದ್ದತೆಗಳು, ಪತ್ರಕರ್ತರ,ಅಧಿಕಾರಿಗಳ ದಂಡು ಬರುತ್ತದೆ, ಆದರೆ ಇಲ್ಲಿ ಅದ್ಯಾವುದು ಇರಲಿಲ್ಲ.
ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರ ಗ್ರಾಮವಾಸ್ತವ್ಯ ನಡೆಯಿತು.
ಗ್ರಾಮ ವಾಸ್ತವ್ಯಕ್ಕಾಗಿ ಕಾಡಿನ ದಾರಿಯಲ್ಲಿ ಕಾಲ್ನಡಿಗೆಯಲ್ಲೇ ಹೆಜ್ಜೆ ಹಾಕಿದ ಶಾಸಕ ಸುನಿಲ್ ಕುಮಾರ್
ಆದಿವಾಸಿ ಸಮುದಾಯದ ದಿನೇಶ್ ಗೌಡ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಕಾಡಿನ ಮುಗ್ದ ನಿವಾಸಿಗಳ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾದರು. ಸರಳತೆಯಿಂದ ಬೆರೆತು ಕುಶಲೊಪರಿ ಮಾತುಕತೆಯ ಮೂಲಕ ಅಹವಾಲು ಆಲಿಸಿದರು.
ದಟ್ಟ ಅರಣ್ಯದ ನಡುವೆ 11 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಕೃಷಿ ಅವಲಂಬಿತರು. ಜಾನುವಾರು ಸಾಕಾಣೆಯನ್ನು ನಡೆಸಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಮಾಡಿಕೊಂಡು ಸಾವಯವ ಕೃಷಿಗೆ ಒತ್ತುಕೊಟ್ಟು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ
ಒತ್ತು ನೀಡಿ ವಿದ್ಯಾವಂತರನ್ನಾಗಿಸುವ ಪಣ ತೊಟ್ಟವರಿವರು.
ಪ್ರಕೃತಿದತ್ತ ನೀರನ್ನು ಬಳಸಿ ನೈಸರ್ಗಿಕವಾಗಿ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬಿಗಳಾಗಿ ತಮ್ಮ ದಿನ ಬಳಕೆಗೆ ಬಳಸಿಕೊಳ್ಳುತ್ತಿರುವುದನ್ನು ಶಾಸಕರು ಅಹವಾಲು ಸ್ವೀಕಾರ ಸಂದರ್ಭ ತಿಳಿದುಕೊಂಡು ನಿವಾಸಿಗಳ ಶ್ರಮದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿವಾಸಿ ಮನೆಯಲ್ಲೇ ಉಳಿದುಕೊಂಡು ಉಟೋಪಚಾರವನ್ನು ಸ್ವೀಕರಿಸಿದರು. ದಿನೇಶ್ ಗೌಡ ಪುಷ್ಪ ದಂಪತಿಗಳ ಜೊತೆಗೆ ವಸಂತ ಗೌಡ, ಸತೀಶ್
ಕಾಡಿನೊಳಗಡೆ ನಿವಾಸಿಗಳು ಅನುಭವಿಸುವ ಸಮಸ್ಯೆಗಳು, ಅಲ್ಲಿನ ಮೂಲಭೂತ ಸೌಕರ್ಯ. ಸಮುದಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಈ ಕುಟುಂಬಗಳ ಅಭಿವೃದ್ದಿಗೆ ಸರಕಾರ ಮಟ್ಟದಲ್ಲಿ ಅನುದಾನ ತರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದರು. ಪರಿಸರದ ದೇವಸ್ಥಾನ, ದೈವಸ್ಥಾನ, ಕುಲಕಸುಬು, ಕೃಷಿ ಸಂಬಂದಿತ ಸಮಸ್ಯೆಗಳನ್ನು ಸಮಧಾನ ಚಿತ್ತದಿಂದ ಆಲಿಸಿ ಸ್ಪಂದನೆಯ ಜೊತೆಗೆ ಸ್ಥಳಿಯ ದೈವಸ್ಥಾನವೊಂದರ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದರು.
ತಮ್ಮ ಮನೆಗಳಿಗೆ ಬಂದು ಅಹವಾಲು ಸ್ವೀಕರಿಸಿ, ಸಂಕಟ ಆಲಿಸಿದಕ್ಕೆ ಅಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದರು. ಶಾಸಕರು ವಾಸ್ತವ್ಯ ಹೂಡಿದ್ದ ಮನೆಯವರು ಸೇರಿ ಡೀಕಯ್ಯ ಗೌಡ ಹಾಗೂ ಸುತ್ತಲಿನ ನಿವಾಸಿಗಳು ಸಂತ್ರಪ್ತ ಭಾವನೆಯೊಂದಿಗೆ ಶಾಸಕರನ್ನು ಬೀಳ್ಕೊಟ್ಟರು.