Share this news

 

 

 

ಬೆಂಗಳೂರು: ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬಾರದು ಖಾಯಂ ನೌಕರರಾಗಿ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಈಗಾಗಲೇ ಕೆಲವು ಜನರನ್ನು ಕಾಯಂ ಮಾಡಲಾಗಿದೆ. ಮೇ 1 ರಂದು ಕಾರ್ಮಿಕ ದಿನಾಚರಣೆಯಂದೇ ಖಾಯಂ ನೇಮಕಾತಿ ಪತ್ರ ವಿತರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸದ್ಯ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆದಾರರು ವೇತನ ಕೊಡುತ್ತಿದ್ದರು. ಅವರು ಸರಿಯಾಗಿ ಸಂಬಳ ಕೊಡುತ್ತಾ ಇರಲಿಲ್ಲ ಎಂಬ ಆರೋಪಗಳಿದ್ದವು. ಅಲ್ಲದೆ, ಇವರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗುತ್ತಾ ಇರಲಿಲ್ಲ. ಹೀಗಾಗಿ ಕನಿಷ್ಠ ವೇತನ ಕಾಯ್ದೆ ಪ್ರಕಾರ, 7000 ರೂಪಾಯಿ ಇದ್ದ ಸಂಬಳವನ್ನು 17000 ರೂಪಾಯಿಗಳಿಗೆ ಹೆಚ್ಚಳ ಮಾಡಿದ್ದೇವೆ. ಪೌರಕಾರ್ಮಿಕರಿಗೆ ಪುರಸಭೆಗಳು, ನಗರಪಾಲಿಕೆಗಳು ನಗರಸಭೆಗಳು ನೇರವಾಗಿ ವೇತನವನ್ನು ಕೊಡಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದರು.

ಪೌರಕಾರ್ಮಿಕರು ಸ್ವಚ್ಛ ಮಾಡುವವರು. ಈ ಸ್ವಚ್ಛತೆ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ಪರಿಸರ ಉತ್ತಮವಾಗುತ್ತದೆ. ನಾವೆಲ್ಲ ದೇವಸ್ಥಾನಗಳಿಗೆ, ಚರ್ಚ್ಗಳಿಗೆ, ಗುಡಿಗಳಿಗೆ ದೇವರನ್ನು ಪೂಜಿಸಲು ಹೋಗುತ್ತೇವೆ. ಆದರೆ, ನೀವು ನೀವು ಸ್ವಚ್ಛತೆ ಮಾಡುವ ಕಾಯಕವೇ ದೇವರು ಎಂದು ಕೆಲಸ ಮಾಡುತ್ತೀರಿ. ನೀವು ಕೂಡ ಎಲ್ಲರಂತೆ ಸಮಾನರು. ಆದರೆ, ಬಸವಣ್ಣನವರು ನುಡಿದಂತೆ ಕಾಯಕವೇ ಕೈಲಾಸ ಎಂದು ಸಮಾಜದ ಸ್ವಚ್ಛತೆಗೆ ದುಡಿಯುವರರು ಎಂದು ಸಿದ್ದರಾಮಯ್ಯ ಪೌರಕಾರ್ಮಿಕರನ್ನು ಹೊಗಳಿದ್ದಾರೆ.

 

 

Leave a Reply

Your email address will not be published. Required fields are marked *