Share this news

 

 

 

ಯಾದಗಿರಿ : ಕಳೆದ 3 ವರ್ಷದಿಂದ ನನಗೆ ವೇತನ ನೀಡಿಲ್ಲವೆಂದು ಗ್ರಾಮ ಪಂಚಾಯತ್ ಸ್ವಚ್ಛತಾ ವಾಹನ ಚಾಲಕಿ ಯಾದಗಿರಿಯ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಮುಂದೆ ಕಣ್ಣೀರು ಹಾಕಿದ್ದಾರೆ.

ಹತ್ತಿಗುಡೂರು ಗ್ರಾಮ ಪಂಚಾಯತಿ ಸ್ವಚ್ಛತಾ ವಾಹಿನಿ ವಾಹನ ಚಾಲಕಿ ಅನುರಾಧಾ ಅವರು, ಕಳೆದ 3 ವರ್ಷಗಳಿಂದ ನಾನು ಸಂಬಳ ಇಲ್ಲದೆ ದುಡಿಯುತ್ತಿದ್ದು, ನನ್ನ ಕುಟುಂಬದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ, ಆದ್ದರಿಂದ ನನ್ನ ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಪಾವತಿಸಿ ಎಂದು ಚಾಲಕಿ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಚಾಲಕಿಯ ಅಹವಾಲು ಆಲಿಸಿದ ಸಚಿವ ಶರಣಬಸಪ್ಪ ದರ್ಶನಾಪುರ ನಾನು ಈ ಕ್ಷೇತ್ರದ ಶಾಸಕನಾಗಿದ್ದರೂ ವೇತನ ಪಾವತಿಯಾಗದಿರುವ ಕುರಿತು ನನಗೆ ಯಾಕೆ ಮಾಹಿತಿ ನೀಡಿಲ್ಲ, ಕಳೆದ ಮೂರು ವರ್ಷಗಳಿಂದ ವೇತನ ಇಲ್ಲ ಅಂತ ಹೇಳುತ್ತಿದ್ದೀಯಲ್ಲಮ್ಮ ನನ್ನನ್ನು ಭೇಟಿಯಾಗಿ ಒಂದು ಮಾತು ಹೇಳಬೇಕು ತಾನೆ ಎಂದು ಪ್ರಶ್ನಿಸಿದ್ದಾರೆ, ಕೂಡಲೇ ಸಂಬAಧಪಟ್ಟ ಅಧಿಕಾರಿಗಳಿಗೆ ಹೇಳಿ ಶೀಘ್ರದಲ್ಲಿ ವೇತನ ಬಿಡುಗಡೆ ಮಾಡಿಸುವುದಾಗಿ ಸಚಿವ ಶರಣಬಸಪ್ಪ ದರ್ಶನಾಪುರ್ ಭರವಸೆ ಕೊಟ್ಟಿದ್ದಾರೆ.

 

 

 

Leave a Reply

Your email address will not be published. Required fields are marked *