Share this news

ಹೆಬ್ರಿ: ಹೆಬಿಯ್ರ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾರತ ಸಂಸ್ಕೃತಿ ಪ್ರತಿಷ್ಠಾನ (ರಿ) ಬೆಂಗಳೂರು, ಇವರು ನವೆಂಬರ್ ತಿಂಗಳಲ್ಲಿ ನಡೆಸಿರುವ ರಾಮಾಯಣ – ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಏಳು ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪ್ರದಾನ ಹಾಗೂ ಪರೀಕ್ಷೆ ಬರೆದ ಸಂಸ್ಥೆಯ ಸುಮಾರು 205 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಸಮಾರಂಭ ಗುರುವಾರ ನಡೆಯಿತು.

ಅಮೃತ ಭಾರತಿ ವಸತಿ ನಿಲಯದ ಸದಸ್ಯರಾದ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಸಂಸ್ಕೃತ ಕಾಲೇಜಿನ ಅಲಂಕಾರ ಶಾಸ್ತ್ರದ ಪ್ರಾಧ್ಯಾಪಕ ಡಾ.ಅಮೃತೇಶ್.ಆಚಾರ್ಯ ಮಾತನಾಡಿ ರಾಮಾಯಣ ಮತ್ತು ಮಹಾಭಾರತ ಅಧ್ಯಯನವನ್ನು ನಾವು ಜೀವನದಲ್ಲಿ ಅವಶ್ಯವಾಗಿ ಮಾಡಬೇಕು. ಅದರಿಂದ ನಮ್ಮ ನಡತೆ ಮತ್ತು ವ್ಯವಹಾರವನ್ನು ಶುದ್ಧೀಕರಿಸುತ್ತದೆ. ಅಯೋಧ್ಯೆಯ ಕಥೆಯಿಂದ ಮಾನವತೆ, ಕಿಷ್ಕಿಂಧೆಯ ಕಥೆಯಿಂದ ಪ್ರಾಣಿತ್ವವನ್ನು, ಲಂಕೆಯ ಕಥೆಯಿಂದ ರಾಕ್ಷಸತನವನ್ನು ಹೋಗಲಾಡಿಸಿ ದೇವತ್ವವನ್ನು ತಂದುಕೊಡುವ ಮಹಾನ್ ಗ್ರಂಥವಾಗಿದೆ ಅಲ್ಲದೆ ರಾಮ – ಕೃಷ್ಣ ರ ಆದರ್ಶ ಗುಣಗಳು ಸಾಧಕನಿಗೆ ಪ್ರೇರಣೆ ನೀಡುತ್ತದೆ ಎಂದರು.

ಸAಸ್ಥೆಯ ವಿದ್ಯಾರ್ಥಿಗಳಾದ ಧ್ರುವ ವಿಜಯ್, ಯತೀಶ್, ಪೂರ್ವಿ.ಎಂ.ರಾವ್, ಪುಷ್ಕರ್ ಪೂಜಾರಿ , ಪ್ರಣಮ್ಯ .ಕೆ, ಲಾವಣ್ಯ ಹೆಚ್ ವಿ, ಭಾರ್ಗವ ಅಡಿಗ, ಸ್ವರ್ಣ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದರು.
ಈ ಸಂದರ್ಭದಲ್ಲಿ ಪರೀಕ್ಷಾ ಸಂಯೋಜಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಮೃತಭಾರತಿ ವಿದ್ಯಾಲಯದ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಸಂಸ್ಥೆಯ ಗುರೂಜಿ ಮಾತಾಜಿ ಉಪಸ್ಥಿತರಿದ್ದರು.
ಬಹುಮಾನಿತ ಪಟ್ಟಿಯನ್ನು ಹಿಂದಿ ಭಾಷಾ ಶಿಕ್ಷಕಿ ಮೀನಾಕ್ಷಿ ವಾಚಿಸಿದರು. ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕಿ ಸೌಪರ್ಣಿಕಾ ಜೋಶಿ ನಿರೂಪಿಸಿ, ಆಂಗ್ಲ ಭಾಷಾ ಶಿಕ್ಷಕಿ ಸಾವಿತ್ರಿ ಕಿಣಿ ವಂದಿಸಿದರು.

 

 

Leave a Reply

Your email address will not be published. Required fields are marked *