ಕಾರ್ಕಳ:ಬೈಪಾಸ್ ರಸ್ತೆಯ ಶಿವತಿಕೆರೆಯ ಸವಿತಾ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ವಿಂಟೇಜ್ ರಾಯಲ್ ಸ್ಕೂಪ್ ನ ಹೊಟೇಲ್ ವಿಂಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ಮೇ.09ರಂದು ಬೆಳಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.
ಖ್ಯಾತ ತುಳು ಚಿತ್ರನಟ ಭೋಜರಾಜ ವಾಮಂಜೂರು ನೂತನ ಹೊಟೇಲ್ ವಿಂಟೇಜ್ ಇದರ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ ಕತ್ತಲ್’ಸಾರ್ ಭಾಗವಹಿಸಲಿದ್ದಾರೆ.
ವಿಂಟೇಜ್ ಎಂಬ ಹೆಸರೇ ಸೂಚಿಸುವಂತೆ ಈ ಹೊಟೇಲಿನ ಒಳಭಾಗದಲ್ಲಿ ಹಳೆಯ ಕಾಲದ ಪೀಠೋಪಕರಣಗಳನ್ನು ವಿನ್ಯಾಸ ಮಾಡಲಾಗಿದೆ .ಪ್ರಮುಖವಾಗಿ ಟೇಬಲ್ ಗಳನ್ನು ಹಳೆಯ ಕಾಲದ ಲ್ಯಾಂಬಿ ಹಾಗೂ ವೆಸ್ಪಾ ಮಾದರಿಯ ಸ್ಕೂಟರ್ ಗಳನ್ನು ಬಳಸಿ ನಿರ್ಮಿಸಲಾಗಿದೆ.
ಗ್ರಾಹಕರ ಆಯ್ಕೆ ಹಾಗೂ ಅಭಿರುಚಿಗೆ ತಕ್ಕಂತೆ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ತಂದೂರಿ ಐಟಮ್ಸ್ ,ಪಿಜ್ಜಾ ಮತ್ತು ಬರ್ಗರ್,ವಿಂಟೇಜ್ ರಾಯಲ್ ಸ್ಕೂಪ್ ಸ್ಪೆಷಲ್ ಐಸ್ ಕ್ರೀಮ್, ಚಾಟ್ಸ್, ಜೈನ್ ಫುಡ್ ಸೇರಿದಂತೆ ವಿವಿಧ ಬಗೆಯ ಸಾಕಷ್ಟು ಖಾದ್ಯಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ರಾಜೇಶ್ ಸುವರ್ಣ ತಿಳಿಸಿದ್ದಾರೆ.