
ಕಾರ್ಕಳ,ಜೂ.02: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐ.ಐ.ಟಿ.) ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಅಡ್ವಾನ್ಸ್ಡ್ 2026ರ ಫಲಿತಾಂಶದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ 14 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದು, ಜನರಲ್ ಮೆರಿಟ್ ವಿಭಾಗದಲ್ಲಿ ನಾಲ್ಕು ವಿದ್ಯಾರ್ಥಿಗಳು ಒಂಬತ್ತು ಸಾವಿರದ ಒಳಗಿನ ರ್ಯಾಂಕ್ ಗಳಿಸಿದ್ದಾರೆ.
ಜನರಲ್ ಮೆರಿಟ್ನಲ್ಲಿ ವಿದ್ಯಾರ್ಥಿಗಳಾದ ಸೋಹನ್ ಗಿರಿರಡ್ಡಿ 6391ನೇ ರ್ಯಾಂಕ್, ತೇಜಸ್ ನಾಯಕ್ 7510ನೇ ರ್ಯಾಂಕ್,ನಿಶಾನ್ ಎನ್ ಸಾಲ್ಯಾನ್ 8642ನೇ ರ್ಯಾಂಕ್, ಕನಿಷ್ಕ್ ಎಸ್ ಅಮಿನ್ 8851ನೇ ರ್ಯಾಂಕ್, ಕೆಟಗರಿ ವಿಭಾಗದಲ್ಲಿ ಶಶಾಂಕ್ ವಿ 167ನೇ ರ್ಯಾಂಕನ್ನು ಹಾಗೂ ಸೋಹನ್ ಗಿರಿರಡ್ಡಿ 759ನೇ ರ್ಯಾಂಕ್ ಪಡೆದಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
