ಕಾರ್ಕಳ: ಕಾರ್ಕಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಸಾಮಾನ್ಯ ವರ್ಗದಿಂದ ಕುಲದೀಪಕ್ ಸುವರ್ಣ, ಚಂದ್ರಶೇಖರ ಬಾಯರಿ ಕೆ, ಪಾಂಡುರಂಗ ಪ್ರಭು, ರಘುವೀರ ಎಂ ಶೆಣೈ, ರವಿರಾಜ ಉಪಾಧ್ಯಾಯ, ರಾಘವ ಶೆಟ್ಟಿ ಹಾಗೂ ಸುದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಜಯಲಕ್ಷ್ಮಿ ಹಾಗೂ ಮೋಹಿನಿ ಜೆ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗ (ಬ) ಮೀಸಲಾತಿಯಲ್ಲಿ ಅಶೋಕ್ ಕುಮಾರ್ ಬಲ್ಲಾಳ್ ಹಾಗೂ ಹಿಂದುಳಿದ ವರ್ಗ (ಅ) ಮೀಸಲಾತಿಯಲ್ಲಿ ಭೋಜ ಪೂಜಾರಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲಾತಿಯಲ್ಲಿ ನಾರಾಯಣ ನಾಯ್ಕ್ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಕಾರ್ಕಳ ತಹಸಿಲ್ದಾರ್ ಪ್ರದೀಪ್ ಆರ್ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.