Share this news

ಕಾರ್ಕಳ: ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ ವ್ಯಾಪ್ತಿಯ ಕಬ್ಬಿನಾಲೆ ಹಾಗೂ ಬಲ್ಲಾಡಿಯ ವಿವಿಧ ಭಾಗದಲ್ಲಿ ಭಾನುವಾರ ಸಂಭವಿಸಿದ ಮೇಘಸ್ಪೋಟದ ಪರಿಣಾಮವಾಗಿ ಪ್ರವಾಹದಿಂದ ಮನೆ ಹಾಗೂ ಕೃಷಿ ಜಮೀನು ಹಾನಿಯಾಗಿತ್ತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ವಿ. ಸುನಿಲ್ ಕುಮಾರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಭೇಟಿ ವೇಳೆ ಸಂತ್ರಸ್ಥ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಹಾನಿಗೊಳಗಾದ ಮನೆ ಹಾಗೂ ಕೃಷಿ ಭೂಮಿ ಪರಿಶೀಲನೆ ನಡೆಸಿ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂತ್ರಸ್ಥ ಕುಟುಂಬಗಳಿಗೆ ತಕ್ಷಣಕ್ಕೆ ಪರಿಹಾರ ಮಂಜೂರಿಗೆ ಕ್ರಮವಹಿಸಲು, ಹಾನಿಗೊಳಗಾದ ರಸ್ತೆ ಮರು ನಿರ್ಮಾಣ ಇತ್ಯಾದಿ ದುರಸ್ತಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೃಷಿ, ತೋಟಗಾರಿಗೆ ಸಂಬಂದಿಸಿ ಹೆಚ್ಚು ನಷ್ಟ ಉಂಟಾಗಿದ್ದು ನಷ್ಡ ಅಂದಾಜು ಪಟ್ಟಿ ಸಿದ್ದ ಪಡಿಸುವಂತೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖಾದಿಕಾರಿಗಳಿಗೆ ಸೂಚಿಸಿದರು

Leave a Reply

Your email address will not be published. Required fields are marked *