ಕಾರ್ಕಳ: ಜಮ್ಮು-ಕಾಶ್ಮೀರದ ಪುಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಹೇಯ ಭಯೋತ್ಪಾದಕ ದಾಳಿ ಇಡೀ ದೇಶವೇ ಒಟ್ಟಾಗಿ ಖಂಡಿಸಬೇಕಿದೆ. ಹಿಂದುಗಳನ್ನೇ ಗುರಿಯಾಗಿಸಿ ನಡೆಸಿದ ಈ ಪೈಶಾಚಿಕ ಕೃತ್ಯದಲ್ಲಿ 30ಕ್ಕೂ ಅಧಿಕ ಪ್ರವಾಸಿಗರು ಬಲಿಯಾಗಿದ್ದು,ಈ ಘಟನೆ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಉಗ್ರರಿಗೆ ಧರ್ಮವಿಲ್ಲ ಎಂದು ವಾದಿಸುತ್ತಿದ್ದವರು ಈ ಘಟನೆಯ ಬಳಿಕ ಏನು ಹೇಳುತ್ತಾರೆ ? ದಾಳಿ ಸಂದರ್ಭದಲ್ಲಿ ನಿಮ್ಮ ಧರ್ಮ ಯಾವುದು ಎಂದು ಪ್ರಶ್ನಿಸಿ ಹಿಂದೂಗಳು ಎಂದು ಖಚಿತವಾದ ಬಳಿಕ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಹತ್ಯೆಗೈದ ಉಗ್ರರ ಧರ್ಮ ಯಾವುದು ಎಂದು ಸಾಬೀತಾಗಿದೆ.
ಭಾರತದ ಸಾರ್ವಭೌಮತೆಯನ್ನು ಪ್ರಶ್ನಿಸಲು ಹೊರಟರೆ ಉಗ್ರರು ಹಾಗೂ ಅವರನ್ನು ಪೋಷಿಸುವ ಪಾಕಿಸ್ತಾನ ಉಗ್ರ ಪರಿಣಾಮವನ್ನೇ ಎದುರಿಸುತ್ತದೆ. ಭಾರತ ಸರ್ಕಾರ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಸುನಿಲ್ ಎಚ್ಚರಿಕೆ ನೀಡಿದ್ದಾರೆ.