ಮೂಡಬಿದ್ರೆ : ನಮ್ಮ ಮುಖ್ಯ ಉದ್ದೇಶವೇನೆಂದರೆ ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡವು ನಿಂತ ನೀರಾಗಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಇದರ ಸಲುವಾಗಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘದ ಮುಖಾಂತರ ಸಹಕರಿಸುತ್ತಿದ್ದೇವೆ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಅವರು ಜೂನ್.18 ರಂದು ಡೊಂಬಿವಲಿ ಪೂರ್ವದ ಮಂಜುನಾಥ ಸಭಾಗ್ರಹದಲ್ಲಿ ನಡೆದ ಅನಿತಾ ಪಿ.ತಾಕೊಡೆಯವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಕಾರ್ಯಕ್ರಮಕ್ಕೆ ಅನಿತಾ ಅವರ ದೊಡ್ಡ ಅಭಿಮಾನಿಗಳ ಬಳಗವೇ ಬಂದಿದೆ. ರಾಜಕಾರಣಿಗಳ ಹಿಂದೆ ಜನ ಹೋಗುವುದನ್ನು ನೋಡಿದ್ದೇನೆ. ಕವಿಗಳಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗವಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಅನಿತಾ ತಾಕೊಡೆಯವರು ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಸಾಹಿತ್ಯ ಕೈಂಕರ್ಯಕ್ಕೆ ಕರ್ನಾಟಕ ಸಂಘದ ಬೆಂಬಲ ಯಾವತ್ತಿಗೂ ಇದೆ ಎಂದು ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡುತ್ತ ಬಂದವರನ್ನು ಸ್ಮರಿಸಿದರು.
ಸಂಘದ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲವು ಸಮಯದ ಅಂತರದಲ್ಲಿ ನಾವು ಈ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಂಬೈಯ ಹೆಚ್ಚಿನ ಸಾಹಿತಿಗಳು ಇಂದು ಡೊಂಬಿವಲಿಗೆ ಬಂದಿದ್ದಾರೆ. ಇನ್ನು ಮುಂದೆಯೂ ಇದೇ ಸಹಕಾರ ಸಿಗಲಿ ಎಂದರು.
“ನಿವಾಳಿಸಿಬಿಟ್ಟ ಕೋಳಿ” ಕಥಾಸಂಕಲನವನ್ನು ಬಿಡುಗಡೆಗೊಳಿಸಿದ ಕರ್ನಾಟಕ ಮಲ್ಲ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು ಡೊಂಬಿವಲಿ ಕರ್ನಾಟಕ ಸಂಘಕ್ಕೆ ಸಾಹಿತ್ಯಿಕವಾದ ಒಂದು ವಿಶೇಷ ಪರಂಪರೆಯಿದೆ. ಅನಿತಾಳ ಸಾಹಿತ್ಯಿಕ ಬೆಳವಣಿಗೆಯನ್ನು ಆರಂಭದಿAದಲೂ ಕಾಣುತ್ತ ಬಂದಿದ್ದೇನೆ. ಮುಂಬೈಯ ಕನ್ನಡ ಸಾಹಿತ್ಯವನ್ನು ಚುರುಕುಗೊಳಿಸುವಲ್ಲಿ, ಕರ್ನಾಟಕದಲ್ಲೂ ಗುರುತಿಸುವಲ್ಲಿ ಅನಿತಾ ತಾಕೊಡೆಯವರ ಸಾತತ್ಯವನ್ನು ನಾವು ಗಮನಿಸಬೇಕು. ಈ ಕಥಾ ಸಂಕಲನದಲ್ಲಿ ಅವರು ಕಂಡು ಅನುಭವಿಸಿದ, ಜೀವನಾನುಭವಗಳಲ್ಲಿ ದಕ್ಕಿದಂಥ ವಸ್ತುಗಳನ್ನು ಕಥೆಯಾಗಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
“ಲೋಕಲ್ ಟ್ರೈನ್” ಅಂಕಣ ಬರಹಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಕತೆಗಾರ ವಸಂತ ಕಲಕೋಟಿಯವರು, ಈ ಕೃತಿಯ ವಿಶೇಷವೇನೆಂದರೆ ಅನಿತಾ ಅವರು ತಾವು ನೋಡಿದ ವ್ಯಕ್ತಿಗಳನ್ನು, ಘಟನೆಗಳನ್ನು ಪ್ರಾಮಾಣಿಕವಾಗಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಅವರ ಭಾಷೆ ಬಹಳ ಸೊಗಸಾಗಿದೆ ಯಾರೂ ಓದಿ ಅರ್ಥಮಾಡಿಕೊಳ್ಳಬಹುದು ಎಂದು ಪ್ರಶಂಸಿಸಿದರು.
ಕವಿ ನಾಟಕಕಾರ ಸಾದಯ ಮಾತನಾಡಿ, ಈ ಕಥಾ ಸಂಕಲನದಲ್ಲಿ ಪ್ರೀತಿ ಪ್ರೇಮ ಆಕರ್ಷಣೆ, ವಾತ್ಸಲ್ಯ, ಸಂಬAಧ ಹೀಗೆ ಹಲವು ಭಾವಗಳನ್ನು ನಾವು ಕಾಣಬಹುದು. ಇಲ್ಲಿನ ಹೆಚ್ಚಿನ ಕತೆಗಳು ಭಾವನೆಗಳಿಗೆ ಸಂಬAಧಪಟ್ಟವುಗಳಾಗಿದ್ದು ಕೆಲವು ಒಮ್ಮೆಲೆ ತಿರುವನ್ನು ಪಡೆದುಕೊಳ್ಳುತ್ತವೆ ಎಂದು ಕಥಾ ಸಂಕಲನದಲ್ಲಿರುವ ಕತೆಗಳ ವೈಶಿಷ್ಟ್ಯತೆಯನ್ನು ಪರಿಚಯಿಸಿದರು.
ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ಮಾತನಾಡಿ, ಈ ಲೋಕಲ್ ಟ್ರೈನ್ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಆಪ್ತವೆನಿಸುತ್ತದೆ. ಮುಂಬೈಯ ಸಮಸ್ತ ಜೀವನಕ್ರಮ, ಅದರ ಭಾಗವಾದಂಥ ಸಾಮಾನ್ಯರ ಬದುಕನ್ನು, ವೈವಿಧ್ಯಮಯ ಸಂಸ್ಕೃತಿಯನ್ನು ಪರಿಶೀಲಿಸುವಂಥ ಅನಿತಾ ಅವರ ಅಂಕಣಬರಹಗಳ ವಿಶಿಷ್ಟ ಬಗೆಯವು. ಇಲ್ಲಿ ಲೇಖಕಿ ಸ್ವತಃ ನಿರೂಪಕಿಯಾಗಿ ನಿಂತು ನಿರ್ವಹಿಸಿರುವುದು ಲೇಖನಗಳಿಗೆ ತಾಜಾತನವನ್ನೂ, ಲವಲವಿಕೆಯನ್ನೂ ನೀಡುತ್ತದೆ. ಈ ಪ್ರಬಂಧಗಳಲ್ಲಿ ಲಘುದಾಟಿಯಲ್ಲೇ ಜೀವನ ವ್ಯಾಪಾರದ ಸೂಕ್ಷ್ಮಗಳನ್ನು ಹಿಡಿಯುವ ಹವಣಿಕೆಯಿರುವುದನ್ನು ಗಮನಿಸಬಹುದಾಗಿದೆ. ಎಂದು ಕೃತಿಯ ಒಳತಿರುಳನ್ನು ಸೊಗಸಾಗಿ ಪೇಕ್ಷಕರ ಮುಂದೆ ತೆರೆದಿಟ್ಟರು.
ಕೃತಿಕರ್ತೆ ಲೇಖಕಿ ಅನಿತಾ ಪಿ. ತಾಕೊಡೆಯವರು ತಮ್ಮ ಮನದಾಳದ ಮಾತುಗಳನ್ನಾಡುತ್ತ, ಆರಂಭದಿAದಲೂ ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಡೊಂಬಿವಲಿ ಕರ್ನಾಟಕ ಸಂಘದಿAದ ಪ್ರೇರಣೆ ಸಿಕ್ಕಿದೆ. ನನ್ನೆರಡು ಕೃತಿಗಳು ನಾನಿರುವ ಪರಿಸರದಲ್ಲಿ ಲೋಕಾರ್ಪಣೆಯಾಗಬೇಕೆಂಬ ಇಚ್ಛೆಯನ್ನು ಇದೇ ಸಂಘ ನನ್ನ ನಿರೀಕ್ಷೆಗೂ ಮೀರಿ ಅದ್ದೂರಿಯಾಗಿ ನೆರವೇರಿಸಿದೆ. ಇಂದಿನ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ದೂರದಿಂದ ಸಹೃದಯ ಬಾಂಧವರು ಪ್ರೀತಿಯಿಂದ ಡೊಂಬಿವಲಿಗೆ ಬಂದಿದ್ದಾರೆ. ಮುಂಬೈಯಲ್ಲಿ ನಾನು ಸಂಪಾದಿಸಿದ್ದು ತುಳು ಕನ್ನಡಿಗರ ಪ್ರೀತಿ. ಅದುವೇ ನನ್ನ ಜೀವನದ ಆಸ್ತಿ ಎನ್ನುತ್ತ, ತನ್ನ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ಎಲ್ಲ ಸಂಘ ಸಂಸ್ಥೆಗಳ ಸಹಕಾರವನ್ನು ನೆನೆದು ಕೃತಜ್ಞತೆಯನ್ನು ಸಲ್ಲಿಸಿದರು.