Share this news

ಕಾರ್ಕಳ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ಲೋ ಬಿಪಿ ಸಮಸ್ಯೆಯಿಂದ ಮದ್ಯಪಾನದ ಚಟ ಹೊಂದಿದ್ದ ಕೇರಳ ಮೂಲದ ಕಾರ್ಮಿಕ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿಯೇ ಮೃತಪಟ್ಟಿರುವ ಘಟನೆ ಡಿ.20 ರಂದು ನಡೆದಿದೆ.

ಕೇರಳ ಮೂಲದ ಆನಂದನ್ (50) ಮೃತಪಟ್ಟವರು. ಅವರು ಕಳೆದ 5 ತಿಂಗಳಿನಿAದ ಬಜಗೋಳಿಯ ಪದ್ಮಾಪಾರ್ಮ್ಸ್ ನಲ್ಲಿ ಅವರ ಸಂಬAಧಿ ಗಾಂಧಿರಾಜ್ ಎಂಬವರ ಜೊತೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಲೋ ಬಿಪಿ ಸಮಸ್ಯೆ ಇದ್ದು ಅದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಸುತ್ತಿರಲಿಲ್ಲ. ಅಲ್ಲದೆ ಮದ್ಯಪಾನ ಮಾಡುವ ಚಟವೂ ಇತ್ತು.

ಆನಂದನ್ ರವರು ಡಿ.20 ರಂದು ಎಂದಿನAತೆ ಕೆಲಸ ಮಾಡಿದ್ದು ಮಧ್ಯಾಹ್ನ ಎದೆ ಉರಿ ಬರುತ್ತಿದೆ ಎಂದು ಹೇಳಿದ್ದು ಗಾಂಧಿರಾಜ್ ಅವರಿಗೆ ನಿಂಬೆಜ್ಯೂಸ್ ಕುಡಿಸಿ ಗ್ಯಾಸ್ಟ್ರಿಕ್ ಮಾತ್ರೆ ಕೊಟ್ಟಿದ್ದು ಬಳಿಕ ಗುಣಮುಖರಾಗಿದ್ದರು. ಬಳಿಕ ಗಾಂಧಿರಾಜ್‌ರವರು ರಬ್ಬರ್ ಹಾಲು ತೆಗೆಯಲು ತೋಟಕ್ಕೆ ಹೋಗಿದ್ದು ವಾಪಾಸು ಬಂದಾಗ ಆನಂದನ್ ಸಿಟ್ ಔಟ್‌ನಲ್ಲಿ ಮಲಗಿದ್ದು ಯಾವುದೇ ಪ್ರತಿಕ್ರಿಯೆ ನೀಡದಿರುವ ಕಾರಣ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಆನಂದನ್ ಲೋ ಬಿಪಿ ಸಮಸ್ಯೆ ಚಿಕಿತ್ಸೆ ಪಡೆದಯ ಕಾರಣ ಆರೋಗ್ಯ ಹದಗೆಟ್ಟು ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *