ಕಾರ್ಕಳ: ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಸಮಾಜದ ದಾನಿಗಳ ಸಹಕಾರದಿಂದ ಜಿಎಸ್ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಪರಿಸರದ ಆರ್ಥಿಕವಾಗಿ ಹಿಂದುಳಿದ ನಾಗೇಶ ಪ್ರಭು ಕಾಜರಳ್ಳಿ ಯವರಿಗೆ ಕಟ್ಟಿಸಿ ಕೊಡುತ್ತಿರುವ ನೂತನ ಮನೆಯ ಭೂಮಿ ಪೂಜೆ ಕಾರ್ಯಕ್ರಮವು ಅಕ್ಟೋಬರ್ 3 ರಂದು ನಡೆಯಿತು. ಬಸ್ರೂರು ಶ್ರೀ ಗೋಕರ್ಣ ಮಠದ ಪುರೋಹಿತರಾದ ವೇದಮೂರ್ತಿ ಶ್ರೀ ಮಹೇಶ್ ಭಟ್ ರವರು ಭೂಮಿ ಪೂಜೆ ಶಿಲಾನ್ಯಾಸ ದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ.ಸತೀಶ್ ಹೆಗಡೆ ಕೋಟ ,ಸಂಚಾಲಕರಾದಆರ್.ವಿವೇಕಾನAದ ಶೆಣೈ ,ಕಾರ್ಕಳ ಹಾಗೂ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಸಾಹೇಬರ ಕಟ್ಟೆ ಸಿರಿಯಾರ ಜಿ ಎಸ್ ಬಿ ಸೇವಾ ಸಂಘದ ಪ್ರಮುಖರುಗಳಾದ ಮಧುವನ ಮಾಧವ ಹೆಗಡೆ, ಅಶೋಕ ಪ್ರಭು, ಮಧುವನ ಗಣೇಶ್ ನಾಯಕ್, ರವೀಂದ್ರನಾಥ ಕಿಣಿ, ಮಹೇಶ ಶೆಣೈ ಗಾವಳಿ, ರವಿಪ್ರಕಾಶ ಪ್ರಭು ಗಾವಳಿ, ವಿಶ್ವನಾಥ ಶಾನ್ ಬಾಗ್, ಶಿವಾನಂದ ಶಾನುಭಾಗ್, ಕೃಷ್ಣಮೂರ್ತಿ ಕಾಮತ್ ಎಡ್ತಾಡಿ, ನಿತ್ಯಾನಂದ ಪೈ ಕಾಜರಳ್ಳಿ, ಸುಭಾಷ್ ಪ್ರಭು ಕಾಜರಹಳ್ಳಿ, ಸುರೇಶ್ ಮಲ್ಯ, ಸಾಹೇಬರಕಟ್ಟೆ, ಪ್ರಮೀಳಾ ಪ್ರಭು, ಯಶೋದ ಮಲ್ಯ, ಕಾವ್ಯ ಹೆಗಡೆ, ಚಂದ್ರಕಲಾ ಪೈ, ಸವಿತಾ ಪ್ರಭು, ವಿದ್ಯಾ ಶಾನುಭಾಗ್, ಸಂಪತ್ ನಾಯಕ್, ಪಿ. ವಿದ್ಯಾನಂದ ಶರ್ಮ ಕಾರ್ಕಳ, ಸಿದ್ದಾಪುರ ವಾಸುದೇವ ಪೈ ಉಡುಪಿ, ದಾನಿಗಳಾದ ರಾಧಾಕೃಷ್ಣ ನಾಯಕ್ ಕೋಟ, ವೈಜಯಂತಿ ಕಾಮತ್, ಅನಂತ ಪೈ ಹಾಗೂ ಕಲ್ಪನಾ ಅನಂತಪೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಗ್ರಹ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಉಚಿತ ನಿವೇಶನವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಸ್ಥಳೀಯ ಸಾಮಾಜಿಕ ಮುಂದಾಳುಗಳಾದ ಪ್ರದೀಪ್ ಬಲ್ಲಾಳರವರನ್ನು ಜಿಎಸ್ ಬಿ ಸಮಾಜದ ವತಿಯಿಂದ ಗೌರವಿಸಲಾಯಿತು.
ಮನೆ ನಿರ್ಮಾಣದ ಭೂಮಿ ಪೂಜೆಯ ದಿನದಿಂದ ಮುಂದಿನ 92 ದಿನಗಳ ಒಳಗಾಗಿ(ಜನವರಿ 17 _ 2025)ದಾಖಲೆ ಅವಧಿಯಲ್ಲಿ ಸುಮಾರು 12 ಲಕ್ಷಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಸಮಾಜ ಬಾಂಧವರ, ಹಿತೈಷಿ ದಾನಿಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ ಎಂದು ಜಿಎಸ್ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದಆರ್. ವಿವೇಕಾನಂದ ಶೆಣೈ, ಗ್ರಹ ನಿರ್ಮಾಣ ಯೋಜನೆಯ ನೇತೃತ್ವವನ್ನು ವಹಿಸಿರುವ ಮಧುವನ ಮಾಧವ ಹೆಗಡೆ ಮತ್ತು ಅಶೋಕ್ ಪ್ರಭು ಸಾಹೇಬರಕಟ್ಟೆ ಶಿರಿಯಾರರವರು ತಿಳಿಸಿರುತ್ತಾರೆ.